ಭಟ್ಕಳ: ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಅಪಕರಣಕ್ಕೆ ಒಳಗಾಗಿದ್ದ ಬಾಲಕನನ್ನು ಜಿಲ್ಲಾ ಪೊಲೀಸರು ವಾಪಸ್ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ವಾಪಸ್ ಪಡೆಯುವ ಸಲುವಾಗಿ ಅಜ್ಜನೇ ಮೊಮ್ಮಗನ ಕಿಡ್ನಾಪ್ ಮಾಡಿಸಿರುವುದು ಭಟ್ಕಳದ ಆಜಾದ್ ನಗರದಲ್ಲಿ ನಡೆದ ಬಾಲಕನ ಕಿಡ್ನಾಪ್ ಪ್ರಕರಣದಲ್ಲಿ ಬಯಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಬಾಲಕನನ್ನು ಗೋವಾ ಕಲ್ಲಂಗುಟ್ ನಲ್ಲಿ ಪತ್ತೆ ಹಚ್ಚಿದ್ದಾರೆ. ಭಟ್ಕಳ ಬದ್ರಿಯಾ ನಗರದ ಅನೀಸ್ ಭಾಷಾ ಎಂಬಾತನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಬಾಲಕನ ತಾಯಿಯ ಮಾವ ಹಾಗೂ ಬಾಲಕನ ತಂದೆಯ ನಡುವೆ ಹಣದ ವ್ಯವಹಾರವಿತ್ತು.
ಕೊಟ್ಟ ಹಣವನ್ನು ವಾಪಸ್ ಪಡೆಯುವ ಸಲುವಾಗಿ ಅಜ್ಜನೇ ತನ್ನ ಸಹಚರರಿಂದ ಕಿಡ್ನಾಪ್ ಮಾಡಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕನ ಅಜ್ಜ ದುಬೈನಲ್ಲಿರುವ ಇನಾಯ್ಉಲ್ಲಾ ಹಾಗೂ ಇನ್ನೂ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಬ್ಬನನ್ನು ಮಾತ್ರ ಬಂಧಿಸಲಾಗಿದ್ದು, ಇನ್ನೂ ನಾಲ್ವರನ್ನು ಬಂಧಿಸಬೇಕಿದೆ.
ಸಿಸಿ ಟಿವಿ ದೃಶ ಹಾಗೂ ಕುಟುಂಬದ ಹಿನ್ನೆಲೆಯನ್ನು ಆಧರಿಸಿ ಕಾರ್ಯಾಚರಣೆ ನಡೆದಿದೆ ಎಂದು ಎಸ್ಪಿ ಡಾ. ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.. ಅಂಗಡಿಗೆ ಹೋಗಿದ್ದ ಪಟ್ಟಣದ ಆಜಾದ್ ನಗರದ ಬಾಲಕ ಶನಿವಾರ ನಾಪತ್ತೆಯಾದ್ದ.