ಭಟ್ಕಳ: ಸಮುದ್ರ ತೀರದಲ್ಲಿ ಕಡವೆ ಮೃತ ದೇಹ ತೇಲಿ ಬಂದಿರುವ ಘಟನೆ ಸೋಮವಾರ ಜಾಲಿಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ನದಿ, ಹಳ್ಳ,ಕೊಳ್ಳಗಳು ತುಂಬಿ ಹರಿಯುತ್ತಿದೆ. ಹೀಗಾಗಿ ಎಲ್ಲೋ ಸಾವನ್ನಪ್ಪಿದ ಕಡವೆ ನದಿಯಲ್ಲಿ ತೇಲಿ ಬಂದು ಸಮುದ್ರ ಸೇರಿದೆ.
ಕಡವೆ ಮೃತ ದೇಹ ಜಾಲಿ ಭಾಗದ ಸಮುದ್ರದಲ್ಲಿ ತೇಲಿ ಬಂದು ದಡದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಅಲ್ಲೇ ಸಮೀಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.