ಕುಂದಾಪುರ: ಹಾಲಾಡಿ ಮತ್ತು ಕಿರಣ್ ಕುಮಾರ್ ಜೋಡಿ ಕುಂದಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಜನರ ಕಲ್ಯಾಣಕ್ಕಾಗಿ ದೋಸ್ತಿಗಳು ಸಾಕಷ್ಟು ಕೆಲಸಗಳನ್ನು ಮಾಡಿರುವುದು ಜನರಿಗೆ ತಿಳಿದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೊಂದಿಗೆ ಜನಮನ್ನಣೆ ಗಳಿಸಿರುವ ಜೋಡಿಗಳಿಗೆ ಮತವನ್ನು ನೀಡಬೇಕು, ಡಬ್ಬಲ್ ಇಂಜಿನ್ ಸರಕಾರ ಕರಾವಳಿ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಓಟು ನೀಡಿದರೆ ಶ್ರೀನಿವಾಸ್ ಶೆಟ್ಟಿ ಅವರಿಗೆ ನೀಡಿದಂತೆ ಕರ್ನಾಟಕದಲ್ಲಿ ವಿಕಾಸ ಮುಂದುವರಿಯ ಬೇಕಾದರೆ ಬಿಜೆಪಿ ಸರಕಾರ ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕೆಂದು ಬಿಜೆಪಿ ಪಕ್ಷದ ಕೇಂದ್ರ ಮುಖಂಡರಾದ ವಿಜೇಂದರ್ ಗುಪ್ತಾ ಹೇಳಿದರು.
ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪರ್ತಕರ್ತರನ್ನು ಉದ್ದೇಶಿಸಿ ಮಾತನಾಡಿದರು.
40% ಸರಕಾರ ಎನ್ನುವುದು ಕಾಂಗ್ರೆಸ್ ಪಕ್ಷದ ಸುಳ್ಳು ಆರೋಪ ಆಗಿದೆ,ಕಾಂಗ್ರೆಸ್ ಪಕ್ಷ ಭ್ರಷ್ಟಚಾರದ ಮಹಾಪೋಷಕ, ಜನರಿಗೆ ಬಿಜೆಪಿ ಮತ್ತು ಮೋದಿ ಸರಕಾರದ ಮೇಲೆ ವಿಶ್ವಾಸ ಇದೆ ನಾವೂ ಬಹುಮತ ಪಡೆದು ಪೂರ್ಣಪ್ರಮಾಣದ ಸರಕಾರ ನಡೆಸುತ್ತೇವೆ ಎಂದರು.
ಚುನಾವಣೆ ಉಸ್ತುವಾರಿ ಶ್ಯಾಮಲ ಕುಂದರ್,ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಮತ್ತಿತರರು ಉಪಸ್ಥಿತರಿದ್ದರು.