ಕಾರವಾರ: ಬಿಜೆಪಿ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಳದ ಸೇವಾ ಪ್ರಾಕ್ಷಿಕ ಪೂರ್ವಭಾವಿ ಸಭೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಧಿಕಾರವನ್ನು ಸೇವೆಯ ರೂಪದಲ್ಲಿ ನಿರ್ವಹಿಸಬೇಕು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಮ್ಮ ದೇಶ ವಿಶ್ವ ಗುರುವನ್ನಾಗಿಸಲು ಮುಂದಾಗಿದ್ದಾರೆ. ಅವರ ಶ್ರಮ ಅಪಾರ.ಸೆ.17ರಿಂದ ಅ.2ರ ವರೆಗೆ ನಡೆಯುವ ವಿವಿಧ ಕಾರ್ಯಕ್ರಮದ ಜವಾಬ್ದಾರಿಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ನಗರ ಪ್ರಭಾರಿ ಆರತಿ ಗೌಡ ಮಾತನಾಡಿದರು. ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಷ್ ಗುನಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ಜಿಲ್ಲಾಉಪಾಧ್ಯಕ್ಷ ನಯನಾ ನೀಲಾವರ, ನಗರ ಸಭೆ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾ ಪ್ರಕೋಸ್ಟಾದ ವಿ.ಎಂ.ಹೆಗಡೆ, ಮಾಧ್ಯಮ ವಕ್ತಾರ ನಾಗರಾಜ್ ನಾಯಕ ಹಾಗೂ ಇನ್ನಿತರು ಇದ್ದರು.