ಕಾರವಾರ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಚರಿಸಲಾಯಿತು. ಯುವ ಮೋರ್ಚಾ ಸದಸ್ಯರು, ನರೇಂದ್ರ ಮೋದಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿರಿಯರು ರಕ್ತದಾನ ಮಾಡಿದರು.
ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ ಯುವ ಮೋರ್ಚಾ ತಂಡದ ಕಾರ್ಯವನ್ನು ಶ್ವಾಘಿಸಿದರು. ಅಧ್ಯಕ್ಷತೆ ವಹಿಸಿದ ಕಾರವಾರದ ಕ್ರಿಮ್ಸ್ ನಿರ್ದೇಶಕರಾದ ಡಾ. ನಾಗರಾಜ ನಾಯಕ್ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿದರು.
ಕಾರ್ಯಕರ್ಮದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ನಾಗೇಶ್ ಕುರುಡೆಕರ್, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ್ ಗುನಗಿ, ಸ್ಥಳೀಯ ನಗರಸಭೆ ಸದಸ್ಯರಾದ ರೋಶನಿ ಮಾಲಸೇಕರ, ಜಿಲ್ಲಾ ಕ್ಷಯರೋಗ ಅಧಿಕಾರಿ ಮಂಜುನಾಥ್ ನಾಯಕ್, ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ವೆಂಕಟೇಶ್, ಡಾ. ಮಂಜುನಾಥ್, ಡಾ. ಸಂದೀಪ ಯಾದವ, ಭಟ್, ನಗರ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ್ ಕುಮಾರ್, ಜಿಲ್ಲಾ ಬಿಜೆಪಿಯ ನಯನಾ ನೀಲಾವರ,ಸುಜಾತಾ ಬಾಂದೇಕರ್, ಯುವಮೋರ್ಚಾ ನಗರ ಅಧ್ಯಕ್ಷ ಶುಭಂ ಕಳಸ, ಗ್ರಾಮೀಣ ಅಧ್ಯಕ್ಷ ಪ್ರಣಯ ರಾಣೆ, ಒಬಿಸಿ ಮೋರ್ಚಾ ನಗರ ಅಧ್ಯಕ್ಷ ಮುರುಳಿ ಗೋವೇಕರ್, ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ನಾಯ್ಕ, ದಿಲೀಪ್ ನಾಯ್ಕ, ಚೆಂಡಿಯಾ ಗ್ರಾಪಂ ಅಧ್ಯಕ್ಷ ಜಿತೇಶ ಅರ್ಗೆಕರದ ಹಾಗೂ ಇನ್ನಿತರು ಇದ್ದರು.