ಕಾರವಾರ: ಪ್ರಧಾನಿ ಮೋದಿಯವರು ಪ್ರಪ್ರಥಮವಾಗಿ ನಮ್ಮ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ ಬರುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಕ್ಷಭೇದವಿಲ್ಲದೇ ಪಾಲ್ಗೊಳ್ಳಿ ಎಂದು ಬಿಜೆಪಿ ಮುಖಂಡ ಡಾ.ಗಜೇಂದ್ರ ನಾಯ್ಕ ಮನವಿ ಮಾಡಿದರು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಿ ರೂಪಾಲಿ ನಾಯ್ಕ ಅವರು ಕ್ಷತ್ರೀಯ ಕೋಮಾರಪಂತ ಸಮಾಜದ ಅಭಿವೃದ್ಧಿಗೋಸ್ಕರ ಸಭಾಭವನ ನಿಮಿ೯ಸಲು 70 ಲಕ್ಷ ಮಂಜೂರು ಮಾಡಿಸಿದ್ದಾರೆ. ಕಾರವಾರ ಕೋಡಿಬಾಗ ರಸ್ತೆಗೆ ಮತ್ತು ಹೂವಿನ ಚೌಕಿಗೆ ಹೆಂಜಾ ನಾಯ್ಕ ಸರ್ಕಲ್ಎಂದು ನಾಮಕರಣ ಮಾಡಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿದೆ. ಜನತೆ ಮೇ 3ರಂದು ಅಂಕೋಲಾಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಕ್ಷತ್ರೀಯ ಕೊಮಾರಪಂತ ಪ್ರತಿಷ್ಠಾನನದ ಅಧ್ಯಕ್ಷ ಆರ್.ಎಸ್.ನಾಯ್ಕ, ಸುಧಾಕರ ನಾಯ್ಕ, ರಾಜೇಂದ್ರ ನಾಯ್ಕ, ಅಶೋಕ ರಾಣೆ ಹಾಜರಿದ್ದರು.