ಕಾರವಾರ: ತಾಲೂಕಿನ ಉಳಗಾದ ಮಹಾಸತಿ ಪದವಿ ಪೂರ್ವ ಮಹಾವಿದ್ಯಾಲಯದ ಕಲಾ ಮತ್ತು ಕ್ರೀಡಾ ವಿಭಾಗಗಳ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಗುರುವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಈಗಾಗಲೇ ತಮ್ಮ ಕಾಲೇಜಿನಲ್ಲಿ ವಿಧ್ಯಾರ್ಥಿ ಸಂಘದ ಚುನಾವಣೆ ನಡೆಸಿ ಅದರ ಉದ್ಘಾಟನೆ ಸಹ ಮಾಡಲಾಗಿದೆ. ನಾನು ಸಹ ರಾಜಕೀಯದಲ್ಲಿ ಇಷ್ಟು ದೊಡ್ಡ ಸ್ಥಾನಕ್ಕೆ ಬರಲು ಹಲವಾರು ಕಷ್ಟ ಅನುಭವಿಸಿದ್ದೇನೆ. ಕಾರವಾರ ನಗರಸಭೆಯಲ್ಲಿ 5 ಭಾರಿ ಸದಸ್ಯರಾಗಿದ್ದು 2 ಸಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ.
ನನ್ನ ಜೀವನದಲ್ಲಿ ಒಂದು ಬಾರಿಯಾದರೂ ವಿಧಾನ ಸೌಧ ಮೆಟ್ಟಿಲು ಹತ್ತಲೇ ಬೇಕು ಎಂದು ಮನಸ್ಸು ಮಾಡಿದ್ದು, ಕಳೆದ 2008 ಸಾಲಿನಲ್ಲಿ ಕಾರವಾರ- ಅಂಕೋಲಾ ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧೆಗೆ ಭಾಗವಹಿಸಿ 28 ಸಾವಿರ ಮತಗಳನ್ನು ಪಡೆದು ಸೋಲು ಅನುಭವಿಸಿದೆ. ಬಳಿಕ 2016ನೇ ಸಾಲಿನಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯಿಂದ ವಿಧಾನ ಪರಿಷತ್ ಚುನಾವಣೆ ಸ್ಫರ್ಧೆ ಮಾಡಿ ಕೇವಲ 200 ಮತಗಳ ಅಂತರದಲ್ಲಿ ಸೋಲು ಕಂಡಿದೆ. ಆದರೂ ನನ್ನ ಛಲ ಬಿಡದೆ ಮತ್ತೆ ಈ ಸಹ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿ ಇದೀಗ ವಿಧಾನ ಪರಿಷತ್ ಶಾಸಕರಾಗಿ ನಿಮ್ಮ ಮುಂದೆ ಇದ್ದೇನೆ. ಅದಕ್ಕೆ ಹೇಳುವುದು ಮನುಷ್ಯನಿಗೆ ಛಲ ಇದ್ದರೆ ಎನನ್ನಾದರೂ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತಿ ಸಹಾಯಕ ಆಯುಕ್ತರು, ದಿಲೀಪ್ ನಾಯ್ಕ ,ಉಳಗಾ ಶಿವಾಜಿ ಎಜ್ಯೂಕೇಶನ್ ಸೊಸೈಟಿ ಉಪಾಧ್ಯಕ್ಷ ಅರವಿಂದ ಆರ್. ನಾಯ್ಕ, ಕಾರ್ಯದರ್ಶಿ ಟಿ.ಯು. ಗುನಗಿ , ಅಧ್ಯಕ್ಷ ಸುನಿಲ್ ದತ್ತ ಗಾಂವಕರ, ವಿದ್ಯಾರ್ಥಿಗಳು ಇದ್ದರು.