News Karnataka Kannada
Saturday, April 27 2024
ಉತ್ತರಕನ್ನಡ

ಕಾರವಾರ: ಮಾಜಾಳಿ ಬಳಿ ಡಿವೈಡರ್ ತೆರವು, ಸ್ಥಳೀಯರ ಮನವಿಗೆ ಶಾಸಕಿ ಸ್ಪಂದನೆ

Mla responds to locals' request to remove divider near Majali
Photo Credit : By Author

ಕಾರವಾರ: ರಾಷ್ಟೀಯ ಹೆದ್ದಾರಿ -೬೬ರಿಂದ ದೇವತಿ ದೇವಸ್ಥಾನ, ಸೈಲವಾಡಾ, ಗಾಂವಗೇರಿಗೆ ಹೋಗಲು ಅನುಕೂಲವಾಗುವಂತೆ ಹೆದ್ದಾರಿಯಲ್ಲಿದ್ದ ಡಿವೈಡರ್ ತೆರವು ಮಾಡಿ ಸ್ಥಳೀಯರಿಗೆ ದಾರಿ ಮಾಡಿಕೊಡುವಂತೆ ಶಾಸಕಿ ರೂಪಾಲಿ ನಾಯ್ಕ ಅವರು ಐಆರ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮಾಜಾಳಿಯ ಸಾರ್ವಜನಿಕರು ಮನವಿ ಸಲ್ಲಿಸಿದರು. ರಾಷ್ಟೀಯ ಹೆದ್ದಾರಿಯ ಮೂಲಕ ಕಾರವಾರದಿಂದ ದೇವತಿ ದೇವಸ್ಥಾನ, ಸೈಲ್ ವಾಡಾ ಮತ್ತು ಗಾಂವಗೇರಿಗೆ ಹೋಗುವವರು ಮಾಜಾಳಿ ಚೆಕ್ ಪೋಸ್ಟ್ಹೋಗಿ ಸುತ್ತು ಹಾಕಿ ಬರಬೇಕಾಗುತ್ತದೆ. ಇದೂ ಅಲ್ಲದೇ ಕೆಲ ವಾಹನಗಳು ಮಾಜಾಳಿಯ ಮೀನು ಮಾರುಕಟ್ಟೆಯ ವೃತ್ತದಿಂದ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಇರುತ್ತವೆ.

ಹಾಗಾಗಿ ಹೆದ್ದಾರಿಯಲ್ಲಿ ಹಾಕಲಾಗಿರುವ ಡಿವೈಡರ್ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಶಾಸಕರ ಬಳಿ ಮನವಿ ಮಾಡಿದರು. ಮನವಿ ಸ್ಪಂದಿಸಿದ ಶಾಸಕಿ ರೂಪಾಲಿ ಅವರು ಸ್ಥಳದಲ್ಲಿಯೇ ಐಆರ್‌ಬಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು, ಹೆದ್ದಾರಿಯಿಂದ ಗಾಂವಗೇರಿಗೆ ಹೋಗುವ ಮಾರ್ಗವು ತುಂಬ ಹಳೆಯ ರಸ್ತೆಯಾಗಿದೆ. ಅಲ್ಲದೇ ಜನವಸತಿ ಪ್ರದೇಶ ಇದಾಗಿರುವುದರಿಂದ ಡಿವೈಡರ್ ತೆರವು ಮಾಡಿ ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.  ಶಾಸಕರ ಮನವಿ ಸ್ಪಂದಿಸಿದ ಐಆರ್‌ಬಿ ಅಧಿಕಾರಿಗಳು ಡಿವೈಡರ್ ತೆರವು ಮಾಡುವ ಭರವಸೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು