News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೀಮೆಎಣ್ಣೆ ಕುರಿತು ಸಭೆ

Karawara
Photo Credit : By Author

ಕಾರವಾರ: ಹುಬ್ಬಳ್ಳಿಯ ಸೀಮೆಎಣ್ಣೆ ಎಚ್.ಪಿ.ಸಿ ಟರ್ಮಿನಲ್ ಮುಚ್ಚಿದ ಹಿನ್ನಲೆಯಲ್ಲಿ ಪ್ರಸ್ತುತವಾಗಿ ಗೋವಾದ ವಾಸ್ಕೋದಲ್ಲಿನ ಸೀಮೆಎಣ್ಣೆ ಎಚ್.ಪಿ.ಸಿ ಟರ್ಮಿನಲ್‌ನಿಂದ ಜೋಯಿಡಾ ತಾಲೂಕಿಗೆ ಸೀಮೆ ಎಣ್ಣೆ ಎತ್ತುವಳಿಗೆ ತಗುಲುವ ಹೆಚ್ಚುವರಿ ಸಾರಿಗೆ ವೆಚ್ಚವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಸೀಮೆ ಎಣ್ಣೆ ವಿಷಯಗಳ ಕುರಿತು ಚರ್ಚೆ ಸಭೆಯಲ್ಲಿ ಮಾತನಾಡಿದ ಅವರು ಪ್ರಸುತ್ತವಾಗಿ ಕಾರ್ಯನಿರ್ವಹಿಸುತಿರುವ ಸೀಮೆ ಎಣ್ಣೆ ಡೀಲರ್ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳಿಗೆ ಆದಷ್ಟು ಬೇಗ ಮುಂದಿನ ತಿಂಗಳಲ್ಲಿ ಸೀಮೆಎಣ್ಣೆ ಎತ್ತುವಳಿ ಮಾಡುವ ಕಾರ್ಯವಾಗಬೇಕು ಹಾಗೂ ಅದಕ್ಕೆ ಸಂಬAಧಿಸಿದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸೀಮೆ ಎಣ್ಣೆ ಎತ್ತುವಳಿ ಕಾರ್ಯಕ್ಕೆ ಕೆಲವು ಡೀಲರ್ಸ್ ಆರ್ಥಿಕ ಹೊರೆ ಎದುರಿಸುತ್ತಿದ್ದು, ಇನ್ನೊಂದು ಕಡೆ ಸಗಟು ನಾಮಿನಿದಾರರಿಗೆ ಹೆಚ್ಚುವರಿ ಸೀಮೆ ಎಣ್ಣೆ ಹಂಚಿಕೆ ಮಾಡಿದ್ದಲ್ಲಿ ಸ್ವಂತ ಲಾರಿಗಳಿಲ್ಲದೆ ಎತ್ತುವಳಿ ಹಾಗೂ ಹಂಚಿಕೆಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸಾಧ್ಯವಾದಷ್ಟು ಸಮಯದಲ್ಲಿ ಜಿಲ್ಲೆಯಲ್ಲಿ ಸೀಮೆಎಣ್ಣೆ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ರತಿ ತಿಂಗಳಿಗೆ ಅಯುಕ್ತರು ನೀಡಿದ ಸೀಮೆಎಣ್ಣೆ ಹಂಚಿಕೆ ಪ್ರಮಾಣದಲ್ಲಿ ಐ.ಒ.ಸಿ, ಬಿ.ಪಿ.ಸಿ ಮತ್ತು ಎಚ್.ಪಿ.ಸಿ ಕಂಪನಿವಾರು ಬಿಡುಗಡೆ ಮಡಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಸ್ತುತವಾಗಿ ೪ ಐ.ಒ.ಸಿ ೨ ಬಿ.ಪಿ.ಸಿ ಮತ್ತು ೩ ಎಚ್.ಪಿ.ಸಿಡೀಲರ್ ಗಳು ಕರ್ತವ್ಯನಿರ್ವಹಿಸಿಸುತ್ತಿದ್ದು, ಐ.ಒ.ಸಿ ಕಂಪನಿಗೆ ೧೦ ಲೋಡ್, ಬಿ.ಪಿ.ಸಿ ಕಂಪನಿಗೆ ೯ ಲೋಡ್ ಮತ್ತು ಎಚ್.ಪಿ.ಸಿ ಕಂಪನಿಗೆ ೫ ಲೋಡ್ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಸಭೆಯಲ್ಲಿ ವರದಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿಗಳು ಕಾರವಾರ ಲೀಡ್ ಬ್ಯಾಂಕ್ ಮ್ಯಾನೆಜರ್, ಹಳಿಯಾಳ ಆಹಾರ ನಿರೀಕ್ಷಕರು ಹಾಗೂ ಜಿಲ್ಲೆಯ ಎಲ್ಲ ಸೀಮೆಎಣ್ಣೆ ಸಗಟು ನಾಮಿನಿದಾರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು