ಕಾರವಾರ: ನಾಗರಪಂಚಮಿ ಅಂಗವಾಗಿ ನಗರದ ಜನ ಶಕ್ತಿ ವೇದಿಕೆಯಿಂದ ಕಿವುಡ ಮತ್ತು ಮೂಗ ಮಕ್ಕಳಿಗೆ ಹಾಲು- ಬಿಸ್ಕತ್ ವಿತರಿಸುವ ಮೂಲಕ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಿತು.ನಾಡಿನಾದ್ಯಂತ ಮಂಗಳವಾರ ನಾಗರಪಂಚಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಜನರು ದೇವಸ್ಥಾನಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲನ್ನ ಎರೆಯುವ ಮೂಲಕ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ.
ಆದ್ರೆ ಕಾರವಾರದಲ್ಲಿ ಜನಶಕ್ತಿ ವೇದಿಕೆ ಹಬ್ಬದ ಪ್ರಯುಕ್ತ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಗೆ ತೆರಳಿ, ಮಕ್ಕಳಿಗೆ ಹಾಲು, ಬಿಸ್ಕತ್ ಹಾಗೂ ಶೇಂಗಾ ಚಿಕ್ಕಿ ವಿತರಿಸುವ ಮೂಲಕ ನಾಗರಪಂಚಮಿ ಹಬ್ಬವನ್ನ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಮಕ್ಕಳು ಕೂಡ ಖುಷ್ ಖುಷಿಯಿಂದ ಜನಶಕ್ತಿ ವೇದಿಕೆಯವರು ನೀಡಿದ ಹಾಲು- ಬಿಸ್ಕತ್ತನ್ನ ಪಡೆದರು. ಹಬ್ಬದ ಹೆಸರಿನಲ್ಲಿ ಜನರು ಹುತ್ತಗಳಿಗೆ, ನಾಗರಕಲ್ಲಿಗೆ ಹಾಲನ್ನ ಅರ್ಪಿಸಿ ವ್ಯರ್ಥವಾಗಿ ಪೋಲು ಮಾಡುತ್ತಿದ್ದಾರೆ. ಬದಲಿಗೆ ಊಟಕ್ಕೆ ಅನುಕೂಲ ಇಲ್ಲದ ನಿರ್ಗತಿಕರಿಗೆ ಅದನ್ನ ನೀಡಿದಲ್ಲಿ ಒಂದು ಜೀವವನ್ನ ಉಳಿಸಿದ ಪುಣ್ಯ ಸಿಗುವುದರ ಜೊತೆಗೆ ಅದರ ಸದ್ಬಳಕೆ ಮಾಡಿದಂತಾಗುತ್ತದೆ.
ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜನಶಕ್ತಿ ವೇದಿಕೆ ವತಿಯಿಂದ ಇಂದು ಹಬ್ಬದ ದಿನವನ್ನು ವಿಶಿಷ್ಟವಾಗಿ ಆಚರಿಸಲಾಗಿದ್ದು, ಇದು ನಿಜಕ್ಕೂ ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ ಜನಶಕ್ತಿ ವೇಕೆಯ ಮಾಧವ ನಾಯಕ, ರಾಮಾ ನಾಯ್ಕ ಸೇರದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.