ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 16 ಸಾಧಕರಿಗೆ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿ, ಸಾಧಕರ ಪಟ್ಟಿ ಬಿಡುಗಡೆ ಮಾಡಿದೆ.
ನ.1ರಂದು ನಡೆಯಲಿರುವ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ಜಿಲ್ಲಾಡಳಿತ ನೀಡಿ ಗೌರವಿಸಲಿದೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಟಾ ತಾಲೂಕಿನ ವೆಂಕಟೇಶ ನಾರಾಯಣ ಪ್ರಭು, ಹಳಿಯಾಳದ ತುಕಾರಾಮ ಮಾತ್ರು ಗೌಡ, ಕಾರವಾರದ ಪ್ರಕಾಶ ಬಿ. ರೇವಣಕರ್ ಅವರಿಗೆ ಗೌರವಿಸಲಾಗುತ್ತಿದೆ.
ಅದರಂತೆ ಯಕ್ಷಗಾನದಲ್ಲಿ ಸಾಧನೆ ಮಾಡಿದ ಕುಮಟಾದ ಸುಕ್ರಪ್ಪ ನಾರಾಯಣ ನಾಯ್ಕ, ಸಿದ್ದಾಪುರದ ಅಶೋಕ ಭಟ್,ಸಾಹಿತ್ಯ ಸಂಸ್ಕೃತಿ ಕ್ಷೇತ್ರದ ಕಾರವಾರದ ಬಾಬು ಜೆ. ಅಂಬಿಗ ಶಿರಸಿಯ ಭಾಗೀರಥಿ ಹೆಗಡೆ, ಜಾನಪದ ಕ್ಷೇತ್ರದ ಹೊನ್ನಾವರ ತಾಲೂಕಿನ ಶಾರದಾ ಮಹಾದೇವ ಮೊಗೇರ. ಶಿರಸಿಯ ಗುಡ್ಡಪ್ಪ ಎನ್. ಜೋಗಿ, ರಂಗಭೂಮಿ ಕ್ಷೇತ್ರದ ಭಟ್ಕಳದ ಅಶೋಕ ಮಂಗೇಶ ಮಹಾಲೆ, ಕಲೆ ಕ್ಷೇತ್ರದ ದಾಂಡೇಲಿಯ ದುಂಡಪ್ಪ ಮುತ್ತಣ್ಣ ಗೂಳೂರ, ಪತ್ರಿಕೋದ್ಯಮ ಕ್ಷೇತ್ರದ ಮುಂಡಗೋಡ ತಾಲೂಕಿನ ಪಿ. ಎಸ್. ಸದಾನಂದ, ವೈದ್ಯಕೀಯ ಕ್ಷೇತ್ರದ ಕುಮಟಾದ ಡಾ.ದೀಪಕ ಡಿ. ನಾಯಕ, ಶಿಕ್ಷಣ ಕ್ಷೇತ್ರದ ಅಂಕೋಲಾದ ಮಹೇಶ ನಾಯಕ, ಯು.ಎಂ.ಶಿರ್ಸಿಕರ, ಪರಿಸರ ಕ್ಷೇತ್ರದ ಕುಮಟಾದ ಎಲ್.ಆರ್.ಹೆಗಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.