ಕಾರವಾರ: ಕೇಂದ್ರ ಸರಕಾರವು ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ನಿಲುವನ್ನು ವಿರೋಧಿಸಿ ಕಾರವಾರ ವಿಭಾಗದ ಅಂಚೆ ನೌಕರರು ಮುಖ್ಯ ಅಂಚೆ ಕಚೇರಿ ಎದುರು ಬುಧವಾರ ಒಂದು ದಿನದ ಮುಷ್ಕರ ನಡೆಸಿದರು.
ಎನ್ಎಫ್ಪಿಇ ಸಂಘಟನೆಯು ದೇಶಾದ್ಯಂತ ಅಂಚೆ ನೌಕರರ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ಕಾರವಾರದ ಅಂಚೆ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಕಾರವಾರ ವಿಭಾಗದ ಸುಮಾರು ಅಂಚೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ವಿವಿಧ ಘೋಷವಾಖ್ಯಗಳ ಫಲಕ ಹಿಡಿದು ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಇದರೊಂದಿಗೆ 2004 ರ ನಂತರ ಅಂಚೆ ಇಲಾಖೆಯಲ್ಲಿ ಭರ್ತಿಗೊಂಡ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ ಹೀಗಾಗಿ ಈಗಿರುವ ಎನ್ಪಿಎಸ್ ಪಿಂಚಣಿ ವ್ಯವಸ್ಥೆ ತೆಗೆದು ಹಳೆಯ ಪಿಂಚಣಿಯನ್ನೇ ಮುಂದುವರಿಸಬೇಕು. ಜತೆಗೆ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿಮಾಡಬೇಕು ಎಂದು ಆಗ್ರಹಿಸಿದರು. ಕಾರವಾರ ವಿಭಾಗದಿಂದ ಅವಿನಾಷ ಕಂಬಳಿ ಹಾಗೂ ಇನ್ನಿತರು ಇದ್ದರು.