ಕಾರವಾರ: ಇಲ್ಲಿನ ಕಾರವಾರ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಹಾಲಿ ಆಯುಕ್ತರಿಂದ ಅವರಿಂದ ಆಗಿರುವ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತಾಗಿ ನ್ಯಾಯಾಲಯವು ಆರು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಸದಸ್ಯರ ಅಂತೋನ ಫರ್ನಾಂಡೀಸ್ ಹೇಳಿದರು.
ಅವರು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್.ಪಿ.ನಾಯ್ಕ ಅವರು ಅಂಕೋಲಾ, ಯಲ್ಲಾಪುರ, ಹೊನ್ನಾವರ ಮತ್ತು ಕಾರವಾರದಲ್ಲಿ ಕಾರ್ಯನಿರ್ವಹಿಸುವ ವೇಳೆ ಟೆಂಡರ್ ಪಾಲನೆ ಮಾಡದೇ ಇರುವದು, ಹಾಗೂ ವಿವಿಧ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಹೀಗೆ ವಿವಿಧ ರೀತಿಯ ಭ್ರಷ್ಟಾಚಾರಗಳು ಅವರ ಸೇವಾವಧಿಯಲ್ಲಿ ನಡೆದಿದೆ ಎಂದರು.
ತಾವು ಅವರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕಿದ್ದು, ನ್ಯಾಯಾಲಯವು ಆರು ವಾರದೊಳಗೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಇದನ್ನು ಸ್ವಾಗತಿಸುತ್ತೇನೆ ಎಂದರು. ನಗರಸಭೆಯ ಆಯುಕ್ತರು ನಿಯಮಗಳನ್ನು ಗಾಳಿಗೆ ತೂರಿ ಸರಕಾರದ ಹಣವನ್ನು ಪೋಲು ಮಾಡಲಾಗಿದೆ. ಸರಕಾರಕ್ಕೆ ನಷ್ಟ ಮಾಡುವಂತಾಗಿದೆ. ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವದನ್ನು ತಡೆಯುವದಾಗಿದೆ ಹೊರತು ಅವರ ಮೇಲೆ ಮಾಡುತ್ತಿರುವ ಆರೋಪವಲ್ಲ ಎಂದರು. ಈಗಾಗಲೇ ಜಿಲ್ಲಾಧಿಕಾರಿಗಳು ಅವರ ಸೇವಾವಧಿಯಲ್ಲಿ ವಿವಿಧ ಕಡೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ಅವರ ಭ್ರಷ್ಟಾಚಾರದ ವಿರುದ್ದ ತಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅಂತೋನ ಫರ್ನಾಂಡೀಸ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದತ್ತಾನಂದ ಸಾಳಸ್ಕರ್, ನಟರಾಜ್ ದುರ್ಗೇಕರ್, ಶರದ್ ತಾರಿ, ನಳರಾಜ್ ದುಗೇಕರ್ ಹಾಗೂ ಇನ್ನಿತರರು ಇದ್ದರು.