News Karnataka Kannada
Monday, May 13 2024
ಉತ್ತರಕನ್ನಡ

ಕಾರವಾರ: ಆಳ ಸಮುದ್ರದ ಮೀನುಗಾರಿಕಾ ಬೋಟ್ ಮುಳುಗಡೆ

Karwar: Deep sea fishing boat capsizes
Photo Credit : By Author

ಕಾರವಾರ: ನಗರದ ಬೈತಖೋಲ ಮೀನುಗಾರಿಕಾ ಜಟ್ಟಿಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಬೋಟ್ ಮಾಲೀಕರಿಗೆ ಅಂದಾಜು 50 ಲಕ್ಷ ರೂ. ಹಾನಿ ಆಗಿದೆ. ಬೈತಖೋಲ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ರಂಧ್ರ ಆಗಿದ್ದರಿಂದ ನೀರು ತುಂಬಿದೆ. ಬೋಟ್‌ನಲ್ಲಿ 30 ಮೀನುಗಾರರಿದ್ದು, ಸಮೀಪದಲ್ಲಿದ್ದ ಮತ್ತೊಂದು ಬೋಟಿನ ಸಹಾಯದಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.

ಆಳ ಸಮುದ್ರದಲ್ಲಿ ಮೀನುಗಳನ್ನು ಶಿಕಾರಿ ಮಾಡಿ ಬರುವಾಗ ಘಟನೆ ಸಂಭವಿಸಿದ್ದು, ಬೋಟು ಭಾರವಾದ ಕಾರಣ ಮೀನುಗಾರರು ಹಿಡಿದ ಮೀನುಗಳನ್ನು ಸಮುದ್ರಕ್ಕೆ ಎಸೆದು ಬಳಿಕ ಬೋಟನ್‌ನ ಬೈತಖೋಲ ಜಟ್ಟಿಗೆ ಎಳೆದು ತರಲಾಗಿದೆ. ಆದರೆ ಬಂದರಿನಲ್ಲಿ ನಿಲ್ಲಿಸಿಟ್ಟ ಬಳಿಕವೂ ಬೋಟ್ ಮುಳುಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು