ಕಾರವಾರ: ಮಾ.8ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರವೀಂದ್ರನಾಥ ಕಡಲತೀರದ ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಸಮಾನತೆಗಾಗಿ ಎನ್ನುವ ಉದ್ದೇಶದಿಂದ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸೈಕಲ್ ರ್ಯಾಲಿಗೆ ರವಿವಾರ ನಡೆಯಿತು.
ಪುರುಷರಂತೆ ಮಹಿಳೆಯರನ್ನು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾನತೆ ಧ್ಯೇಯದೊಂದಿಗೆ ಸೈಕಲ್ ಜಾಗೃತಿಗೆ ಲ್ಯಾಂಡ್ ನ ಮೂಲದ ಸಮಾಜ ಸೇವಾ ಕ್ಷೇತ್ರದಲ್ಲಿ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜುಡಿತ್, ನೌಕಾನೆಲೆಯ ಮಹಿಳಾ ಅಧಿಕಾರಿ ನವರೂಪ್ ಕೌರ್, ಡಾ. ಅರ್ಚನಾ ಪಿಕಳೆ, ಅಥ್ಲೆಟಿಕ್ ಓಟಗಾರ್ತಿ ಅರ್ಚನಾ ನಾಯಕ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸೈಕಲ್ ರ್ಯಾಲಿಗೆ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರು ಚಾಲನೆ ನೀಡಿದರು. ನೂರಾರು ಜನರು ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಗರದ ಮಯೂರ ವರ್ಮ ವೇದಿಕೆಯ ಹಿಂಭಾಗದಲ್ಲಿ ಆರಂಭಿಸಿದ ರ್ಯಾಲಿ ಕೋಡಿಭಾಗದ ಕಾಳಿ ರಿವರ್ ಗಾರ್ಡ್ ನ ಬಳಿ ಮುಕ್ತಾಯಗೊಂಡಿದರು. ಈ ಸಂದರ್ಭದಲ್ಲಿ ಕಾರವಾರ ಬೈಸಿಕಲ್ ಕ್ಲಬ್ ನ ಅಧ್ಯಕ್ಷ ಅಧ್ಯಕ್ಷ ಡಾ.ಸುರೇಶ್ ಭಟ್, ಕಾರ್ಯದರ್ಶಿ ಸೂರಜ್ ಹೆಗಡೆ, ಖಜಾಂಚಿ ಆರ್.ವಿ.ಭಟ್, ಡಾ.ಸಚಿನ್ ನಾಯ್ಕ, ಕಿಶೋರ್ ಬಾಂದೇಕರ್, ಕೆ.ಎಂ.ಶೆಟ್ಟಿ, ಮಹಾಬಲ ಶೆಟ್ಟಿ, ವಿನೋದ ನಾಯ್ಕ, ಆನಂದ ಥಾಮ್ಸೆ, ಜಗದೀಶ್ ಓಲೇಕಾರ್, ವಿಷ್ಣು ತೋಡ್ಕರ್, ಶಿವಪ್ರಸಾದ್ ನಾಯ್ಕ ಸಹ ಇದ್ದರು