ಕಾರವಾರ: ಈ ಭಾಗದ ಜನರು ಮೇಧಾವಿಗಳು ಮತ್ತು ಸ್ವಾಮ್ಯ ಸ್ವಭಾವದವರು. ಇದನ್ನು ಕಾಣುವುದೇ ಒಂದು ಖುಷಿ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸಿದ್ದಾಪುರ ತಾಲೂಕಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ಮತ್ತು ಫಲಾನುಭವಿಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗೆ ಕಾಗೇರಿಯರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಇಂದು ದೇಶದ ಸನ್ನಿವೇಶಕ್ಕೆ ಅನುಗುವಾಗಿ ಬದಲಾವಣೆ ಯಾಗುತ್ತಿದೆ ಮೊದಲು ಅಭಿವೃದ್ಧಿ ಮಂದಗತಿಯಲ್ಲಿ ಸಾಗುತ್ತಿತ್ತು ಇಂದು ಅದಕ್ಕೆ ವೇಗ ದೊರೆತಿದೆ ಎಂದರು. ಹಿಂದೆ ನೀರಾವರಿಗೆ ಅಷ್ಟೊಂದ್ದು ಯೋಜನೆಗಳು ಇರಲಿಲ್ಲ ಈಗ ದೇಶಕ್ಕೆ ಜಾಲಜೀವನ ಮಿಷನ್ ಯೋಜನೆಯಡಿಯಲ್ಲಿ 40 ಲಕ್ಷ ಮನೆಗಳಿಗೆ ನೀರಾವರಿ ವ್ಯವಸ್ಥೆ ಮಾಡಲಾಗಿದೆ.
ಪಶ್ಚಿಮಾತ್ಯ ದೇಶದಲ್ಲಿ ಉಳಿತಾಯ ಮನೋಭಾವನೆ ಹೊಂದಿರುವುದಿಲ್ಲ ಆದರೆ ನಮ್ಮ ದೇಶದಲ್ಲಿ ಪ್ರತಿ ಜನರ ಸಂಸ್ಕೃತಿಯಲ್ಲಿ ಉಳಿತಾಯ ಮನೋಭಾವನೆ ಇರುವುದರಿಂದ ಅವರ ವ್ಯಕ್ತಿತ್ವ ಬೆಳವಣಿಗೆ ಜೊತೆಗೆ ಆರ್ಥಿಕವಾಗಿ ಬೆಳವಣಿಗೆ ಹೊಂದಿದೆ. ಆರ್ಥಿಕ ಹೂಡಿಕೆಯಲ್ಲಿ ನಮ್ಮ ರಾಜ್ಯ ಪ್ರಗತಿ ಹಾದಿಯಲ್ಲಿದೆ ಎಂದರು. ಶಿಕ್ಷಣವು ಅತೀ ಮುಖ್ಯ ವಾಗಿದ್ದು ಹೀಗಾಗಿ ವಿವಿಧ ವರ್ಗಗಳಿಗೆ ವಿವಿಧ ಯೋಜನೆಗಳ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲರಿಗೂ ಶಿಕ್ಷಣ ನೀಡುವ ಸಲುವಾಗಿ ಪ್ರಾಥಮಿಕ ಹಂತದಿಂದ ಪದವಿ ವರಿಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದರು.
ಜನರಿಗೆ ದುಡಿಮೆ ಅತೀ ಮುಖ್ಯ ಹೀಗಾಗಿ ವಿವಿಧ ವರ್ಗಗಳಿಗೆ ವಿವಿಧ ಯೋಜನೆಗಳ ಮೂಲಕ ದುಡಿಮೆಯನ್ನು ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾಗೇರಿಯವರ ಅವಿರಿತ ಪರಿಶ್ರಮದಿಂದ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಈ ಭಾಗದಲ್ಲಿ ಆಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ, ಕುಡಿಯುವ ನೀರು, ಬಸ್ಸು ವ್ಯವಸ್ಥೆ, ಕುಮಟಾ ಮತ್ತು ಸಿದ್ದಾಪುರ ರಸ್ತೆ ಕಾಮಗಾರಿ ಆರಂಭಿಸಿದ್ದು ಈ ಭಾಗದ ಬೆಳವಣಿಗೆಗೆ ಸಹಕರಿಯಾಗಿದೆ ಎಂದರು.
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಈ ರಾಜ್ಯದ ಎಲ್ಲಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿದ್ದಾರೆ, ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಕಾಳಜಿ ವಹಿಸಿದ್ದಾರೆ ಈ ಭಾಗದ ಅಭಿವೃದ್ಧಿಗೆ ಅನುದಾನ ನೀಡಿರುವುದರಿಂದ ಇವತ್ತು ಈ ಭಾಗದ ಜನರಲ್ಲಿ ಸ್ವಯಂ ಉದ್ಯೋಗ ಕಲ್ಪಿಸಲು ಹೊಲಿಗೆ ಯಂತ್ರ ನೀಡಿರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡ ಜನರಿಗೆ ಉಚಿತ 75 ಯೂನಿಟ್ ವಿದ್ಯತ್ ನೀಡಿರುವುದು, ಶಾಲಾ ಕೊಠಡಿಗಳ ನಿರ್ಮಾಣ, ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ಗಮನಸೆಳೆದಿದ್ದಾರೆ ಎಂದರು. ಬೃಹತ್ ಮತ್ತು ಮಾಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶಿರ್ಸಿಯಲ್ಲಿ ರೂ.805 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ರೂ. 15 ಕೋಟಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿವಿಧ ಕಾಮಗಾರಿ, ಹಾಗೂ ರೂ.20 ಕೋಟಿ ಸೇತುವೆ ನಿರ್ಮಾಣ ಹೀಗೆ ಈ ಕ್ಷೇತ್ರದ ಅಭಿವೃದ್ಧಿಗೆ ಕಾಗೇರಿಯವರು ಪಣ ತೋಟ್ಟಿದ್ದಾರೆ ಎಂದರು.
ವಿಧಾನ ಸಭೆ ಸಭಾಪತಿ ವಿಶ್ವರಯ ಹೆಗಡೆ ಕಾಗೇರಿ ಮಾತನಾಡಿ, ಇಡೀ ದೇಶದಲ್ಲಿ ನಮ್ಮ ರಾಜ್ಯವನ್ನು ಅತೀ ವೇಗವಾಗಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವಲ್ಲಿ ನಮ್ಮ ಮುಖ್ಯ ಮಂತ್ರಿಗಳು ಸಾಗುತ್ತಿದ್ದಾರೆ. ಇಂದು ಸಿದ್ದಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲು ಆಗಮಿಸಿದ್ದು ನಮ್ಮ ಸುದೈವ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ವಿದ್ಯಾನಿಧಿ ಯೀಜನೆಯಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು, ರೈತ ಶಕ್ತಿ ಯೋಜನೆಯಡಿ ಡಿಸೈಲ್ ವಿತರಣೆ, ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿ ಊಟ ಕಾರ್ಯಕರ್ತರಿಗೆ ಅನುದಾನ ನೀಡಿದರು. 15 ಸಾವಿರ ಶಾಲಾ ಶಿಕ್ಷರ ನೇಮಕಾತಿ ಮಾಡಿದ್ದು, ವಿವೇಕ ಶಾಲಾ ಕೊಠಡಿಗಳ ನಿರ್ಮಾಣ, ಮುಂತಾದ ಪ್ರಗತಿಪರ ಯೋಜನೆಗಳ ಮೂಲಕ ಮುಖ್ಯ ಮಂತ್ರಿಗಳು ಗಮನ ಸೆಳೆದಿದ್ದಾರೆ, ಇವತ್ತು ಸಿದ್ದಾಪುರದಲ್ಲಿ ರೂ. 59 ಕೋಟಿ ವೆಚ್ಚದ ವಿವಿಧ ಕಾಮಗಾರುಗಳಿಗೆ ಚಾಲನೆ ನೀಡಿದ್ದಾರೆ ಎಂದರು. ಮುಂದೆ ಈ ಭಾಗದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನೆರೆವರಿಸಲಾಗುವುದು ಎಂದರು. ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಪಟ್ಟಣ ಪಂಚಾಯತ್ ಸಿದ್ದಾಪುರ ಚಂದ್ರಕಲಾ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕಾಂದೂ, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.