News Karnataka Kannada
Friday, May 03 2024
ಉತ್ತರಕನ್ನಡ

ಕಾರವಾರ: ಸಿಬಿಎಸ್ ಸಿ ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡದಂತೆ ಒತ್ತಾಯ

Kar
Photo Credit : By Author

ಕಾರವಾರ: ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳದಲ್ಲಿ ಸ್ಥಳಾಂತರ ಮಾಡದಂತೆ ಬಿಜೆಪಿ ಗ್ರಾಮೀಣ ಘಟಕ ಕಾರ್ಯದರ್ಶಿ ಘನಶ್ಯಾಮ್ ಬಾಂದೇಕರ್ ಸಂಸದ ಅನಂತಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಶಾಲೆಯಲ್ಲಿ ಒಟ್ಟು 175 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಇಷ್ಟು ವರ್ಷ ತನಕ ಅದೇ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಯು ಅದೇ ಪರೀಕ್ಷಾ ಕೇಂದ್ರದಲ್ಲಿಯೇ ಬರೆಯುತ್ತಿದ್ದರು . ಅದೇ ರೀತಿ ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಈಗ ಸಿಬಿಎಸ್ ಸಿ ಇಲಾಖೆದವರು ಇಷ್ಟು ವರ್ಷ ಕೈಗಾದ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದಲ್ಲಿ ನಡೆಯುತ್ತಿದ್ದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳ ತಾಲೂಕಿನಲ್ಲಿ ಸ್ಥಳಾಂತರ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಅದೇ ರೀತಿ ಅವರಿಗೆ ಪರೀಕ್ಷೆ ಬರೆಯಲು ದೂರದ ಹಳಿಯಾಳ 65 ಕಿ.ಮೀ ಸಂಚಾರ ಮಾಡಬೇಕಾಗುತ್ತದೆ ಇದರಿಂದ ಅವರಿಗೆ ಸರಿಯಾಗಿ ಓದಲು ಸಹ ಸಿಗುವುದಿಲ್ಲ ಆದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಪಡುತ್ತಾರೆ. ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳದಲ್ಲಿ ಸ್ಥಳಾಂತರ ಮಾಡದಂತೆ ಬಿಜೆಪಿ ಗ್ರಾಮೀಣ ಘಟಕ ಕಾರ್ಯದರ್ಶಿ ಘನಶ್ಯಾಮ್ ಬಾಂದೇಕರ್ ಒತ್ತಾಯ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು