ಕಾರವಾರ: ನಗರದ ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯಕಾರಣಿ ಸಭೆ ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷ ಸಂಗತಿ ಎಂದರು. ಕಾರವಾರ ನಗರ ಅಧ್ಯಕ್ಷಬನಾಗೇಶ ಕುರ್ಡೇಕರ ಮಾತನಾಡಿ ನಮ್ಮ ಕೇಂದ್ರ ಸರ್ಕಾರ ಪರಿಶಿಷ್ಟರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದನ್ನು ಉಪಯೋಗ ಪಡೆಯುವ ಮೂಲಕ ಇತರರಿಗೂ ಮಾಹಿತಿ ನೀಡಿ ಅದರ ಉಪಯೋಗ ಪಡೆಯುವಂತೆ ಮಾಡಬೇಕು ಎಂದರು.
ಜಿಲ್ಲಾ ವಿಶೇಷ ಆಹ್ವಾನಿತ ಮನೋಜ ಭಟ್ ಸಭೆಯನ್ನು ಉದ್ದೇಶಿಸಿ ಪಕ್ಷ ತೋರಿಸಿದ ಮಾರ್ಗದಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಸಂಘಟನೆ ಬಲಪಡಿಸಬೇಕು. ಸಂಘಟನೆಯಲ್ಲಿ ಶಕ್ತಿ ಇದೆ ನೀವೆಲ್ಲ ಸಂಘಟನಾತ್ಮಕದಿಂದ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ತಿಮ್ಮಾ ರೆಡ್ಡಿ,ಹಾಗೂ ಕಾರವಾರ ನಗರ ಬಿಜೆಪಿ ಎಸ್ ಸಿ ಮೋರ್ಚಾ ತಾಲೂಕಾಧ್ಯಕ್ಷ ಸತೀಶ್ ವಡ್ಡರ ಹಾಗೂ ಕಾರ್ಯದರ್ಶಿ ರಾಜೇಶ ವಡ್ಡರ, ಸದಸ್ಯರಾದ *ರಾಚಯ್ಯ ಎಸ್ ಕೆ, ರಾಜು. ಆರ್, ಸಮರ್ಥ ಪಿ, ಸಿಂಗಪ್ಪ ಕುರಿ, ಸಂಗಪ್ಪ ಕುರಿ, ಪ್ರಕಾಶ ವಡ್ಡರ್, ಮಂಜು ವಡ್ಡರ ಹಾಗೂ ಕಾರ್ಯಕರ್ತರು ಇದ್ದರು.