ಕಾರವಾರ: ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಅಪರೂಪದ ಪ್ರಜಾತಿಯ ಗ್ರೀನ್ ಸೀ ಪ್ರಜಾತಿಯ ಕಡಲಾಮೆ ಕಳೆಬರ ಪತ್ತೆಯಾಗಿದೆ.
ಕಾರವಾರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಹಾಗೂ ಡಾ. ಶಂತನು ಕಲಂಬಿ ಅವರ ಮಾರ್ಗ ದರ್ಶನದಲ್ಲಿ ಮೃತ ಗ್ರೀನ್ ಸೀ ಕಡಲಾಮೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಆಮೆಗೆ ಸಣ್ಣ ಕರಳಿನ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ದೃಢ ಪಡಿಸಿದರು.
ಸ್ಥಳದಲ್ಲಿ ಕಡಲ ಜೀವಶಾಸ್ತ್ರ ವಿಭಾಗದ ಪ್ರಾಂಶುಪಾಲ್ ಜೆ. ಎಲ್. ರಾಥೋಡ, ಕೋಸ್ಟಲ್ ಮಾರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಡ್ಡಿ ಇದ್ದರು.