ಕಾರವಾರ: ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಒತ್ತುವರಿ ತೆರವು ಮಾಡಿ ಉತ್ತಮ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಾರವಾರ ಇಳಕಲ್ ರಾಜ್ಯ ಹೆದ್ದಾರಿ ಅಗಲೀಕರಣ ಕಾರ್ಯ ಪ್ರಾರಂಭವಾಗಿದೆ. ಪ್ರತಿದಿನ ಸಾಕಷ್ಟು ವಾಹನಗಳು ಓಡಾಡುವ ಕಾರಣ ರಸ್ತೆ ಮಧ್ಯಭಾಗದಿಂದ ಡಿವೈಡರ್ ಅಳವಡಿಸಿ ವಿದ್ಯುತ್ ಕಂಬ ಅಳವಡಿಸಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ರಸ್ತೆ ಅಭಿವೃದ್ಧಿಗೆ ಒತ್ತುವರಿ ಮಾಡಿಕೊಂಡಿದ್ದ ಪ್ರದೇಶದಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕೆಲವರು ರಸ್ತೆ ಮೇಲೆ ಸಂಚರಿಸುವ ಎರಡು ಭಾಗದಲ್ಲಿ ಪ್ರತಿ ದಿನ ದೊಡ್ಡ ವಾಹನವನ್ನು ವರ್ಷವಿಡಿ ಇಡುವುದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಇಂತಹ ವಾಹನ ನಿಲ್ಲಿಸುವ ಮಾಲಿಕರಿಗೂ ಹಾಗೂ ವಾಹನದ ಮೇಲೆ ಕ್ರಮ ಕೈಗೊಳ್ಳಬೇಕು. ಮಳೆ ನೀರಿನಿಂದ ರಸ್ತೆ ಜಲಾವೃತವಾಗಿ ಸಾರ್ವಜನಿಕರು ಶಾಲಾ ಮಕ್ಕಳು ಆಟೋ ಚಾಲಕರು ಪರದಾಡುವುದನ್ನ ತಪ್ಪಿಸಬೇಕು. ಹೆದ್ದಾರಿಯೂ ಕಿರಿದಾಗಿರುವ ಕಾರಣ ಕೈಗಾದಿಂದ ಸಂಚರಿಸುವ ದೊಡ್ಡ ವಾಹನವನ್ನು ಮಲ್ಲಾಪುರದಿಂದ ಸದಾಶಿವಗಡ ರಸ್ತೆ ಮುಖಾಂತರ ಸಂಚರಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೋಷನ್ ಹರಿಕಂತ್ರ ಜಿಲ್ಲಾ ಸಂಚಾಲಕ ಗೋಪಾಲ್ ಗೌಡ. ಜಿಲ್ಲಾ ಕಾರ್ಯದರ್ಶಿ ರಾಜೇಶ್ ಹರಿಕಂತ್ರ, ಮೋಹನ್ ಉಳ್ವೇಕರ್, ಸುದೇಶ್ ನಾಯ್ಕ್. ಸುಶಾಂತ್ ಹರಿಕಾಂತ್, ರಮಕಾಂತ್ ನಾಯ್ಕ್. ಸೂರಜ್ ಉಮೇಶ್ ನಾಯ್ಕ್, ಸದಾನಂದ ಇನ್ನಿತರರು ಇದ್ದರು.