ಕಾರವಾರ: ದಾಂಡೇಲಿ ನಗರಸಭೆ ಅವರಣದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ನಗರಾಡಳಿತದ ವಿರುದ್ಧ ಆದಿಜಾಂಬವಂತ ಸಂಘ ಮತ್ತು ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆಯ ನೇತೃತ್ವದಲ್ಲಿ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೂರ್ತಿ ಪ್ರತಿಷ್ಠಾಪನೆಗೆ ಕಾಮಗಾರಿ ನಡೆಯುತ್ತಿದ್ದರೂ ವಿಳಂಬ ನೀತಿಯಿಂದಾಗಿ ಸಂವಿಧಾನ ಶಿಲ್ಪಿಯ ಪ್ರತಿಮೆ ಪ್ರತಿಷ್ಠಾಪನೆಗೆ ತೊಡಕಾಗುತ್ತಿದೆ. ನಗರಸಭೆಯ ಅಧಿಕಾರಿಗಳು ಮತ್ತು ನಗರಸಭಾ ಸದಸ್ಯರುಗಳು ಆದಷ್ಟು ಬೇಗನೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಜರುಗಿಸಬೇಕೆಂದು ಪ್ರತಿಭಟನಾ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರ, ಜಿಲ್ಲಾ ಉಪಾಧ್ಯಕ್ಷ ಸುರೇಶ ಕೇದಾರಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀನಿತ್ಯ ಕಾಂಬಳೆ, ಕಾಲೂಕು ಘಟಕದ ಮಹಿಳಾಧ್ಯಕ್ಷೆ ಸರಸ್ವತಿ ಚವ್ಹಾಣ, ತಾಲೂಕು ಘಟಕದ ಅಧ್ಯಕ್ಷ ಅನೀಲ ಕಾಂಬಳೆ, ಶಕೀಲಾ ಬಾನು, ಸತೀಶ ಚವ್ಹಾಣ, ನವೀನ, ಸದಾಶಿವ ಕಾಂಬಳೆ, ದ್ಯಾಮಪ್ಪ ಹರಿಜನ, ಹೊನ್ನೂರಪ್ಪ ಜರಿ, ನವೀನ ಜಕ್ಕಂ, ನಿಸಾರ ಶೇಖ್, ರ್ಮಣ್ಣ ಭಜಂತ್ರಿ, ಹುಸೇನ ಮಿಯಾ, ದತ್ತು ಮಾಳಗಿ , ಹನುಮಂತ ಹರಿಜನ, ಕಲ್ಲಪ್ಪ ಹರಿಜನ, ಸ್ನೇಹಾ ದೇಶಾಯಿ, ಶಂಕರ ಪೂಜಾರಿ, ಸಾದಿಕ ಮುಲ್ಲಾ ಮೊದಲಾದವರು ಇದ್ದರು.