ಕೊಪ್ಪ : ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರ್ವೆ ಸಮೀಪದ ತುಂಗಾ ನದಿಯಲ್ಲಿ ಸಂಭವಿಸಿದೆ .
ಇಲ್ಲಿ ನಿರ್ಮಿತ ತೂಗು ಸೇತುವೆ ಬಳಿ ಭಾನುವಾರ ಸ್ನಾನಕ್ಕೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸೋಮವಾರ ನದಿಯಲ್ಲಿ ಮೃತ ದೇಹ ತೇಲುತ್ತಿದ್ದು ಸ್ಥಳೀಯರು ಪರಿಶೀಲಿಸಿದಾಗ ಮೃತ ಯುವಕ ನಾರ್ವೆ ಗ್ರಾಮದ 29 ವರ್ಷದ ಸುನೀಲ್ ಎಂದು ತಿಳಿದು ಬಂದಿದೆ . ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.