ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರಂದು ಮಂಡಿಸಿದ ರಾಜ್ಯ ಆಯವ್ಯಯದ ಬಗ್ಗೆ ವಿಧಾನಮಂಡಳದ ಉಭಯ ಸದನಗಳಲ್ಲೂ ಚರ್ಚೆ ಮುದುವರಿದಿದೆ.
ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಚರ್ಚೆ ವೇಳೆ ಐಪಿಎಲ್ ಬೆಟ್ಟಿಂಗ್ ಮತ್ತು ಆನ್ ಲೈನ್ ಗ್ಯಾಂಬ್ಲಿಂಗ್ ವಿಚಾರ ಪ್ರಸ್ತಾಪಿಸಿದರು.
ಈ ವೇಳೆ, ಆನ್ ಲೈನ್ ಜೂಜು ತಡೆ ಕಾನೂನು ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಸಹಾಯಕತೆ ತೋರುತ್ತಾ, ವಿಷಯದ ಬಗ್ಗೆ ಸ್ಪಷ್ಟನೆ ನೀಡಿದರು.
ಕಾನೂನಿಗೆ ಹೈಕೋರ್ಟ್ ತಡೆ ಕೊಟ್ಟ ಹಿನ್ನೆಲೆ ಕಾನೂನು ಜಾರಿ ಮಾಡಲಾಗ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಸದನದಲ್ಲಿ ಅಸಹಾಯಕತೆ ತೋಡಿಕೊಂಡರು.