ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕಾಂಗ್ರೆಸ್ ಭವನದ ಎದುರುಗಡೆ ಅಳವಡಿಸಲಾಗಿದ್ದ ಕಟೌಟ್ ಗಳನ್ನು ಚುನಾವಣಾ ಅಧಿಕಾರಿಗಳು ಇಂದು ತೆರವು ಮಾಡಿದ್ದಾರೆ.
ಕಾಂಗ್ರೆಸ್ ಭವನದ ಎದುರುಗಡೆ ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರ ಎರಡು ಕಟೌಟ್ ಗಳನ್ನು ಅಳವಡಿಸಲಾಗಿತ್ತು. ಈ ಬ್ಯಾನರ್ ನಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆ ಹಾಗೂ ಭರವಸೆಗಳ ಬಗ್ಗೆ ನಮೂದಿಸಾಗಿತ್ತು. ಇದು ನೀತಿ ಸಂಹಿತೆ ಉಲ್ಲಂಘಣೆಯ ಹಿನ್ನಲೆಯಲ್ಲಿ ಅಧಿಕಾರಿಗಳು ಕಟೌಟ್ ತೆರವು ಮಾಡಿದ್ದಾರೆ. ಹಾಗೆಯೇ ಆಮ್ ಆದ್ಮಿ ಪಾರ್ಟಿ ಸೇರಿದ ಬ್ಯಾನರ್ ಗಳನ್ನು ಸಹ ಅಧಿಕಾರಿಗಳು ತೆರವು ಮಾಡಿದ್ದಾರೆ.