ಉಡುಪಿ: ಬೆಂಗಳೂರಿನ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಗಳು ಸಂಸ್ಥಾನ ಪೂಜೆಯನ್ನು ಮಾಡಿ, ವಿಠಲ ದೇವರಿಗೆ ಅರ್ಚನೆ ಹಾಗೂ ಅರ್ಘ್ಯವನ್ನು ನೀಡಿ ಮಹಾ ಪೂಜೆಯನ್ನು ಮಾಡಿದರು. ಹಾಗೇ ಗೋವರ್ಧನಧಾರಿ ಶ್ರೀಕೃಷ್ಣ ನಿಗೂ ಅರ್ಘ್ಯವನ್ನು ನೀಡಿ ಮಹಾ ಪೂಜೆಯನ್ನು ಮಾಡಿದರು. ತದನಂತರ ತುಳಸಿಕಟ್ಟೆ ಯಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯವನ್ನು ನೀಡಿ ಆರತಿ ಬೆಳಗಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕೃಷ್ಣ ಜನ್ಮಾಷ್ಠಮಿಯ ವೈಭವವನ್ನು ಕಣ್ತುಂಬಿಕೊಂಡರು.