ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನದ ಪ್ರಯುಕ್ತ ಕುಂದಾಪುರ ತಾಲೂಕಿನ ತ್ರಾಸಿ ಆಟೋ ಸ್ಟಾಂಡ್ಯಿನ ರಿಕ್ಷಾ ಚಾಲಕ ಉದಯ ಖಾರ್ವಿ ಅವರು ತ್ರಾಸಿ ಮತ್ತು ಸುತ್ತಮುತ್ತಲಿನ 15.ಕಿ.ಮೀ ವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯ ತನಕ ಸಾರ್ವಜನಿಕರಿಗೆ ಉಚಿತ ಆಟೋ ಸೇವೆಯನ್ನು ಕಲ್ಪಿಸುವುದರ ಮೂಲಕ ಪ್ರಧಾನಿಗಳ ಜನ್ಮ ದಿನಾಚರಣೆಯನ್ನು ಶನಿವಾರ ವಿಶಿಷ್ಟವಾಗಿ ಆಚರಿಸಿದರು.
ಪ್ರಧಾನಿಗಳ ಮೇಲಿರುವ ಅಭಿಮಾನದಿಂದ ಕಳೆದ ಮೂರು ವರ್ಷಗಳಿಂದ ಅವರ ಹುಟ್ಟು ಹಬ್ಬದ ದಿನದಂದು ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದೇನೆ ಇದು ಯಾವುದೆ ರೀತಿಯ ಪ್ರಚಾರಕ್ಕಾಗಿ ಅಲ್ಲಾ ಎಂದು ಹೇಳುತ್ತಾರೆ.