ಕುಂದಾಪುರ: ತಾಲೂಕಿನ ಶ್ರೀಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೧-೨೨ ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ ಭಾನುವಾರ ನಡೆಯಿತು.
೨೦೨೧-೨೨ ನೇ ಸಾಲಿನ ಆಡಳಿತ ವರದಿ,ಆಡಿಟ್ ವರದಿ ಹಾಗೂ ಲಾಭಾಂಶ ೬,೨೭,೨೧೦.ರೂ ಅನ್ನು ವಿಗಂಡಿಸಿ ಸದಸ್ಯರಿಗೆ ೧೦% ಡಿವಿಡೆಂಟ್ ನೀಡುದೆಂದು ಘೋಷಿಸಲಾಯಿತು,೨೦೨೨-೨೩ ನೇ ಸಾಲಿನ ಅಂದಾಜು ಆಯಾವ್ಯಯ ಹಾಗೂ ಮುಂದಿನ ಸಾಲಿನ ಕಾರ್ಯಯೋಜನೆಗಳಿಗೆ ಮಂಜೂರಾತಿ ಪಡೆಯಲಾಯಿತು ಮುಂದಿನ ವರ್ಷದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುದೆಂದು ತಿರ್ಮಾನಿಸಲಾಯಿತು.
ಶ್ರೀಗಣೇಶ ಸೊಸೈಟಿಯ ಅಧ್ಯಕ್ಷ ಮುರಳೀಧರ ಐತಾಳ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು, ಉಪಾಧ್ಯಕ್ಷ ರವೀಶ ಹೊಳ್ಳ,ನಿರ್ದೇಶಕರುಗಳಾದ ಡಿ.ಆರ್.ವಿಷ್ಣುಮೂರ್ತಿ ಕಾರಂತ, ಚಂದ್ರ ನಾಯ್ಕ,ಮಂಜುನಾಥ, ಅಶೋಕ ಖಾರ್ವಿ, ಡಾ.ಕೆ.ಗೋಪಾಲ ಕೃಷ್ಣ ಐತಾಳ್, ಎಚ್.ಶಾಂತರಾಮ ಭಟ್, ವಿಜಯ್ ಪುತ್ರನ್, ಸುಮವತಿ, ಸುರೇಂದ್ರ ನಾವಡ, ಸರಸ್ವತಿ, ಗೋಪಾಲ ಆಚಾರ್ಯ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರವೀಶ ಹೊಳ್ಳ,ವೆಂಕಟೇಶ್ ಕಾರಂತ, ಚAದ್ರಶೇಖರ ಪೂಜಾರಿ ಅರಾಟೆ, ಕೃಷಿಕರಾದ ಸಾಧು ಅವರನ್ನು ಸನ್ಮಾನಿಸಲಾಯಿತು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು.
ಸಲಹೆಗಾರ ವಿಶ್ವಂಭರ ಐತಾಳ್ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಕಿ ಅಶ್ವಿನಿ ಹಿಂದಿನ ಮಹಾಸಭೆ ನಡಾವಳಿ ಮತ್ತು ವಾರ್ಷಿಕ ವರದಿಯನ್ನು ಓದಿ ಹೇಳಿದರು. ಲೆಕ್ಕಿಗ ಶ್ರೀಕರ ಐತಾಳ್ ವಂದಿಸಿದರು. ಪಿಗ್ಮಿ ಸಂಗ್ರಾಹಕ ಸುರೇಶ ಖಾರ್ವಿ ಸಹಕರಿಸಿದರು.