News Karnataka Kannada
Monday, April 29 2024
ಉಡುಪಿ

ಉಡುಪಿ: ಸೈಕಲ್‌ನಲ್ಲಿ ದೇಶವ್ಯಾಪಿ ತೀರ್ಥಕ್ಷೇತ್ರ ಯಾತ್ರೆ ಕೈಗೊಂಡ ಸಾಧಕ ಶರ್ಮಾ

Sadhana Sarma, who undertook a nationwide pilgrimage on a bicycle
Photo Credit : News Kannada

ಉಡುಪಿ: ಗ್ವಾಲಿಯರ್, ಮಧ್ಯ ಪ್ರದೇಶದಿಂದ 71 ವರ್ಷದ ಶ್ರೀ ಅಶೋಕ್ ಶರ್ಮಾ ಜಿ ಅವರು ತಮ್ಮ ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆಯಲ್ಲಿದ್ದಾರೆ.

ಅಶೋಕ್ ಶರ್ಮಾ ಜಿ ಅವರು ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವ ಪವಿತ್ರ ತೀರ್ಥ ಕೇಂದ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಈ ಪ್ರಯಾಣವನ್ನು ಹಮ್ಮಿಕೊಂಡಿದ್ದಾರೆ.

2 ವರ್ಷಗಳ ಹಿಂದೆ ಅವರು ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸಂಚರಿಸಿ ಪ್ರಸ್ತುತ ಕರ್ನಾಟಕದಲ್ಲಿದ್ದಾರೆ, ಇಲ್ಲಿಂದ ಕೆರಳಕ್ಕಾಗಿ ಭಾರತದ ದಕ್ಷಿಣ ತುದಿಯಲ್ಲಿರುವ ಪವಿತ್ರ ಕ್ಷೇತ್ರವಾದ ರಾಮೇಶ್ವರಂಗೆ ಹೋಗಿ ಮರಳಿ ಆಂಧ್ರ ತೆಲಂಗಾಣ ಒರಿಸ್ಸಾ ಛತ್ತೀಸ್ಗಡ್ ಜಾರ್ಖಂಡ್ ಆಗಿ ತಮ್ಮ ಹುಟ್ಟೂರಿಗೆ ವಾಪಸ್ ಹೋಗುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
ಅಯೋಧ್ಯೆ, ಕಾಶಿ, ಕೇದಾರನಾಥ, ಬದರಿನಾಥ, ವೈಷ್ಣವ ದೇವಿ, ಅಮೃತಸರ, ದ್ವಾರಕಾ ಇವರು ಭೇಟಿ ನೀಡಿದ ಹಲವು ಸ್ಥಳಗಳಲ್ಲಿ ಒಂದಾಗಿವೆ.

ಸೈಕಲ್ ಉತ್ಸಾಹಿ ನ್ಯಾಯವಾದಿ ಎಂ.ಕೆ.ವಿಪುಲ್ ಅವರು  ಅಶೋಕ್ ಶರ್ಮಾ ಅವರು ಉಡುಪಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕಾರ್ಕಳದಲ್ಲಿ ಅವರನ್ನು ಸ್ವಾಗತಿಸಿ ಶುಭ ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು