ಉಡುಪಿ: ಬಜೆ ಅಣೆಕಟ್ಟು ಪ್ರದೇಶದ ಪೂರ್ವ ಭಾಗದಲ್ಲಿ ಅಂದರೆ ಪುತ್ತಿಗೆಯಲ್ಲಿರುವ ಸೇತುವೆ ಕೆಳಗೆ ಒಂದು ತಿಂಗಳಿಗಾಗುವಷ್ಟು ಬೇಕಾದಷ್ಟು ನೀರು ಇದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡದೆ ಉಡುಪಿ ಜನರಿಗೆ ರೇಷನ್ ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹೇಳಿದ್ದಾರೆ.
5 ದಿನಗಳಿಗೊಮ್ಮೆ ನೀರು ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ನೀರಿದ್ದರೂ ಸಮರ್ಪಕವಾಗಿ ನಿರ್ವಹಣೆ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ವರ್ಣ ನದಿಯ ಗುಂಡಿಗಳಲ್ಲಿ ನೀರು ಪಂಪಿಂಗ್ ಮಾಡದೇ ಇರುವುದರಿಂದ ಕೃತಕ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.
ಹಾಗಾಗಿ ಕೂಡಲೇ ರೇಷನ್ ಪದ್ಧತಿಯನ್ನು ರದ್ದು ಮಾಡಿ,ನಗರ ವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.