News Karnataka Kannada
Friday, May 03 2024
ಉಡುಪಿ

ಉಡುಪಿ: ರೇಷನ್ ಪದ್ಧತಿ ರದ್ದುಗೊಳಿಸಿ ನಗರದ ಜನತೆಗೆ ಸಮರ್ಪಕವಾಗಿ ನೀರು ಪೂರೈಸಿ- ಗಣೇಶ್ ರಾಜ್ ಆಗ್ರಹ

Ganesh Raj demands scrapping of ration system and providing adequate water supply to the people of the city
Photo Credit : News Kannada

ಉಡುಪಿ: ಬಜೆ ಅಣೆಕಟ್ಟು ಪ್ರದೇಶದ ಪೂರ್ವ ಭಾಗದಲ್ಲಿ ಅಂದರೆ ಪುತ್ತಿಗೆಯಲ್ಲಿರುವ ಸೇತುವೆ ಕೆಳಗೆ ಒಂದು ತಿಂಗಳಿಗಾಗುವಷ್ಟು ಬೇಕಾದಷ್ಟು ನೀರು ಇದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡದೆ ಉಡುಪಿ ಜನರಿಗೆ ರೇಷನ್ ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದು ಸರಿಯಲ್ಲ‌ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹೇಳಿದ್ದಾರೆ.

5 ದಿನಗಳಿಗೊಮ್ಮೆ ನೀರು ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ನೀರಿದ್ದರೂ ಸಮರ್ಪಕವಾಗಿ ನಿರ್ವಹಣೆ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ವರ್ಣ ನದಿಯ ಗುಂಡಿಗಳಲ್ಲಿ ನೀರು ಪಂಪಿಂಗ್ ಮಾಡದೇ ಇರುವುದರಿಂದ ಕೃತಕ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.

ಹಾಗಾಗಿ ಕೂಡಲೇ ರೇಷನ್ ಪದ್ಧತಿಯನ್ನು ರದ್ದು ಮಾಡಿ,ನಗರ ವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು