ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ದೇವಸ್ಥಾನವೊಂದರಲ್ಲಿ ಪಟಾಕಿ ಸಿಡಿಸುವ ವೇಳೆ ಅವಘಡ ಸಂಭವಿಸಿದೆ.
ಅವಘಡದಿಂದ ಹಲವರಿಗೆ ಗಾಯಗಳಾಗಿವೆ. ಇಲ್ಲಿನ ದೇವಸ್ಥಾನವೊಂದರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ನೂರಾರು ಜನ ಸೇರಿದ್ದರು. ಎಂದಿನಂತೆ ಕೆಲವು ಯುವಕರು ಪಟಾಕಿ ಸಿಡಿಸುವ ವೇಳೆ ನೋಡನೋಡುತ್ತಿದ್ದಂತೆಯೇ ಪಟಾಕಿ ಜಂಗುಳಿಯ ಮಧ್ಯೆಯೇ ಸಿಡಿದಿದೆ. ಈ ವೇಳೆ ಪಟಾಕಿಯ ಕಿಡಿ ಹಲವರ ಮೇಲೆ ಬಿದ್ದಿದ್ದು ಜನ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಘಟನೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸಹಿತ ಹಲವರಿಗೆ ಪಟಾಕಿಯ ಕಿಡಿ ತಾಗಿದ್ದು ಬೊಬ್ಬೆ ಹೊಡೆಯುತ್ತಾ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ.