News Karnataka Kannada
Friday, May 17 2024
ಮಂಗಳೂರು

ಮಂಗಳೂರು:  ಸ್ವೀಪ್ ವತಿಯಿಂದ ಮತದಾನಕ್ಕಾಗಿ ಜನಜಾಗೃತಿ

Mangaluru: SVEEP campaigns to create awareness for voting
Photo Credit : News Kannada

ಮಂಗಳೂರು: ಮತದಾನ ಸಂವಿಧಾನಾತ್ಮಕವಾಗಿ ಬಂದ ಹಕ್ಕು. ಅದನ್ನು ಮೇ 10 ರಂದು ನಡೆಯುವ ಚುನಾವಣಾ ಹಬ್ಬದಲ್ಲಿ ಚಲಾಯಿಸಲು ಎಲ್ಲರು ಭಾಗವಹಿಸಬೇಕು, ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಸಾಕಾರಗೊಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.‌ಕುಮಾರ್ ಅವರು ಹೇಳಿದರು.

ಅವರು ಏ.11ರ ಮಂಗಳವಾರ ನಗರದ ಸೇಂಟ್ ಆಗ್ನೇಸ್ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿಯ ಬೀದಿನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಬೀದಿ ನಾಟಕ ಹಾಗೂ ವ್ಯಂಗ್ಯ ಚಿತ್ರದ ಮೂಲಕ ಅರಿವು ಪಡೆದು ಪೋಷಕರು ಹಾಗೂ ಸಮಾಜದಲ್ಲಿ ಮತದಾನ ಹಕ್ಕು ಪಡೆದಿರುವ ಎಲ್ಲರನ್ನು ಮತದಾನ ಮಾಡಲು ಪ್ರೇರೇಪಣೆ ಮಾಡಬೇಕು. ಮತದಾನ ಕೇಂದ್ರಕ್ಕೆ ಹೋಗುವಾಗ ಯಾರೋ ಹೇಳಿದ ಪಕ್ಷಕ್ಕೆ ಮತದಾನ ಮಾಡುವುದಲ್ಲ. ನಾವು ಸ್ವ ಅರಿವಿನಿಂದ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಯುವ ಮತದಾರರು ಹಾಗೂ ಮತದಾನ ಅರಿವು ಹೆಚ್ಚಿಸಲು ಸ್ವೀಪ್ ಸಮಿತಿ ಮತ್ತು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ ಎಂದರು.

ಈ ದೇಶದ ಪ್ರಜೆಯಾಗಿ‌ ನಾವು ಮತದಾನ ಮಾಡಬೇಕು. ಯೋಗ್ಯ ಸರ್ಕಾರ ಹಾಗೂ ಜನಪ್ರತಿನಿಧಿಯನ್ನಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು.

ಸ್ವೀಪ್ ಐಕಾನ್ ಜಗದೀಶ ಪೂಜಾರಿ, ಪ್ರಾಂಶುಪಾಲೆ ಡಾ. ವೆನಿಸಾ ಎ.ಸಿ, ಇಎಲ್ ಸಿ ಸದಸ್ಯ ಡಾ. ಮೀರಾ, ವ್ಯಂಗ್ಯ ಚಿತ್ರಕಾರ ಜಾನ್ ಚಂದ್ರ, ಉದಯ ಕುಮಾರ್ ಬಿ, ಸೆಕ್ಟರ್ ಅಪೀಸರ್ ರಘಪತಿ ಕೇಕುಣ್ಣಾಯ, ಲತಾ, ಸ್ವೀಪ್ ಸಮಿತಿ ಸದಸ್ಯರಾದ ಮಂಜುಳಾ, ತೇಜಾಕ್ಷಿ, ಡೊಂಬಯ್ಯ ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು