ಉಡುಪಿ: ರಾಜ್ಯದಲ್ಲಿ ಬಿಜೆಪಿ 65 ಸೀಟ್ ಗಿಂತ ಹೆಚ್ಚು ಗೆಲ್ಲುವುದಿಲ್ಲ. ಅವರ ಕೌಂಟ್ ಡೌನ್ ಶುರುವಾಗಿದೆ. 60 ದಿನ ಮಾತ್ರ ಬಾಕಿ ಉಳಿದಿದ್ದು, ಮತ್ತೆ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗ್ತಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಹಾನಿ, ಕಷ್ಟ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಬಂದಿದೆ. ಎಲ್ಲ ವರದಿಯಲ್ಲೂ ಬಿಜೆಪಿ ಸೋಲುತ್ತೇ ಅನ್ನುವುದು ಗೊತ್ತಾಗಿದೆ. ಹಾಗಾಗಿ ಪ್ಯಾಚ್ ಆಪ್ ಮಾಡಲು ಮೋದಿ ಬರುತ್ತಿರಬಹುದು. ಮೊದಲು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಅಂದ್ರು, ಈಗ ಮೋದಿ ಫೇಸ್ ಅನ್ನುತ್ತಿದ್ದಾರೆ. ಕರ್ನಾಟಕಕ್ಕೆ ಮೋದಿ ಫೇಸ್ ಯಾಕೆ ಬೇಕು. ಇಲ್ಲಿ ಯಾರು ಆಡಳಿತ ನಡೆಸುತ್ತಾರೆ ಅವರ ಫೇಸ್ ಬೇಕು. ಹಾಗಾಗಿ ಇವರು ಆಡಳಿತ ನಡೆಸುವುದಿಲ್ಲ ಸಾಬೀತಾಗಿದೆ. ಇಲ್ಲಿನ ನಾಯಕರು ಜನರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.