ಕಾಪು: ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಆರ್ಟಿಸ್ಟ್ ಫೋರಂನ ಕಲಾವಿದರಾದ ಶ್ರೀನಾಥ್ ಮಣಿಪಾಲ, ರವಿ ಹೀರಬೆಟ್ಟು ಪುರಂದರ್ ಮಲ್ಪೆ ಅವರು ಆಭರಣ ಜ್ಯುವೆಲ್ಲರ್ ಸಹಯೋಗದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ರಚಿಸಿದ ‘ಅಳಿಲಿನ ಮರಳು ಶಿಲ್ಪ’ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಈ ಮರಳು ಶಿಲ್ಪವು ರಾಮಾಯಣದಲ್ಲಿನ ಅಳಿಲಿನ ಸೇವೆಯನ್ನು ನೆನಪಿಸುತ್ತಿದ್ದು, ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರು ಮರಳು ಶಿಲ್ಪವನ್ನು ಕಣ್ತುಂಬಿಕೊಂಡರು.