ನವದೆಹಲಿ: ಝೀ ಮತ್ತು ಸೋನಿ ನೆಟ್ವರ್ಕ್ ವಿಲೀನ ಒಪ್ಪಂದ ಮುರಿದುಬಿದ್ದ ಕೆಲ ಹೊತ್ತಿನಲ್ಲೇ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಸಂಸ್ಥೆ ಎಂಡಿ ಪುನೀತ್ ಗೋಯಂಕಾ ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಿಂದ ಟ್ವೀಟ್ ಮಾಡಿದ್ದಾರೆ.
‘ನಾನು ಈ ದಿನ ಬೆಳಗ್ಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಬಂದಿದ್ದಾಗ ಒಪ್ಪಂದ ಮುರಿದುಬಿತ್ತೆಂಬ ಮೆಸೇಜ್ ಬಂತು. ನಾನು ಬಹಳ ಪ್ರಾಮಾಣಿಕವಾಗಿ ಸಕಲ ಪ್ರಯತ್ನಗಳನ್ನು ಮಾಡಿಯೂ ಎರಡು ವರ್ಷ ನಾನು ಕನಸು ಕಂಡಿದ್ದ ಯೋಜನೆ ಅಂತ್ಯಗೊಂಡಿತ್ತು ಎಂದು ಹೇಳಿದ್ದಾರೆ.
ಪುನೀತ್ ಗೋಯಂಕಾ ಟ್ವೀಟ್ ಮಾಡಿದಾಗ ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ಈ ಬೆಳವಣಿಗೆಯನ್ನು ಆ ಭಗವಂತನ ಸೂಚನೆ ಎಂದು ಬಣ್ಣಿಸಿದ್ದಾರೆ.
‘ಇದನ್ನು ನಾವು ದೈವೇಚ್ಛೆ ಎಂದು ನಂಬುತ್ತೇನೆ. ಸಕಾರಾತ್ಮಕವಾಗಿ ಇದನ್ನು ಪರಿಗಣಿಸಿ ಮುಂದಡಿ ಇಡುತ್ತೇನೆ. ಈ ಮಾಧ್ಯಮ ಸಂಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತೇನೆ. ಜೈ ಶ್ರೀ ರಾಮ್’ ಎಂದು ಪುನೀತ್ ಗೋಯಂಕಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.