ಉಡುಪಿ: ಸಿದ್ದರಾಮೋತ್ಸವು ಒಬ್ಬ ವ್ಯಕ್ತಿಯ ವೈಭವೀಕರಣವಲ್ಲ. ಸಿದ್ದರಾಮಯ್ಯ ಮಾಡಿರುವ ಸಾಧನೆಗಾಗಿ ಅವರ ಅಭಿಮಾನ, ವಿಶ್ವಾಸದ ವೈಭವೀಕರಣ. ಮುಂದಿನ ಚುನಾ ವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ, ಒಗ್ಗಟ್ಟು ಹಾಗೂ ವಿಶ್ವಾಸ ನೀಡುವ ಕಾರ್ಯಕ್ರಮ ಇದಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ. 3ರಂದು ನಡೆ ಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿ ಸಹಿತ ಅನೇಕರು ಭಾಗವಹಿಸಲಿದ್ದಾರೆ. ಅಭಿಮಾನಿಗಳು ಸೇರಿ ಸಂಘಟನೆಗೆ ಶಕ್ತಿ ತುಂಬಲು ರೂಪಿಸಿರುವ ಈ ಕಾರ್ಯಕ್ರಮವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮತಿಯಲ್ಲಿ ನಡೆಯಲಿದೆ. ರಾಜ್ಯದ ಎಲ್ಲಡೆಯ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ ಎಂದರು.
ರಾಜಕಾರಣ ಜನರ ಸೇವೆಗೋ ಕೊಳ್ಳೆ ಹೊಡೆಯಲೋ ಅಥವಾ ಜೈಲಿಗೆ ಹೋಗಲು ಬರುತ್ತಾರೆಯೋ ಎಂಬುದು ಸ್ಪಷ್ಟವಾಗಿರಬೇಕು ಎಂದರು.