News Karnataka Kannada
Saturday, May 11 2024
ಉಡುಪಿ

ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಸಿಗ್ನಲ್ ಕಂಬಗಳು

ಉಡುಪಿ ಹಳೆ ಡಯಾನ ವೃತ್ತ ಬಳಿ ಹಾದುಹೋಗುವ ಪಾದಚಾರಿ ರಸ್ತೆಯ ಮೇಲೆ ಸಿಗ್ನಲ್ ಕಂಬಗಳು ಮತ್ತು ಅದರ ಜೋಡಣಾ ಪರಿಕರಗಳನ್ನು ಕೆಲವು ತಿಂಗಳಿನಿಂದ ದಾಸ್ತಾನು ಮಾಡಲಾಗಿದ್ದು, ಇದರಿಂದ ಈ ಸೂಕ್ಷ್ಮ ಸ್ಥಳವು ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
Photo Credit : News Kannada

ಉಡುಪಿ: ಉಡುಪಿ ಹಳೆ ಡಯಾನ ವೃತ್ತ ಬಳಿ ಹಾದುಹೋಗುವ ಪಾದಚಾರಿ ರಸ್ತೆಯ ಮೇಲೆ ಸಿಗ್ನಲ್ ಕಂಬಗಳು ಮತ್ತು ಅದರ ಜೋಡಣಾ ಪರಿಕರಗಳನ್ನು ಕೆಲವು ತಿಂಗಳಿನಿಂದ ದಾಸ್ತಾನು ಮಾಡಲಾಗಿದ್ದು, ಇದರಿಂದ ಈ ಸೂಕ್ಷ್ಮ ಸ್ಥಳವು ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ಅನಾಹುತ ಸಂಭವಿಸುವ ಮೊದಲು ಇಲ್ಲಿ ದಾಸ್ತಾನಿಟ್ಟಿರುವ ಪರಿಕರಗಳನ್ನು ಜಿಲ್ಲಾಡಳಿತ ತೆರವುಗೊಳಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.
ಉಡುಪಿಯ ಪರ್ಯಾಯೋತ್ಸವದ ಸಿದ್ಧತೆಗಳು ನಡೆಯುತ್ತಿದೆ. ಪರ್ಯಾಯ ಮೆರವಣಿಗೆ ಈ ರಸ್ತೆಯ ಮೂಲಕ ಹಾದುಹೋಗುತ್ತದೆ. ಲಕ್ಷಾಂತರ ಭಕ್ತರು ಉಡುಪಿಗೆ ಬರುವ ನಿರೀಕ್ಷೆ ಇದೆ. ಹಾಗಾಗಿ ಸಿಗ್ನಲ್ ಕಂಬಗಳ ಪರಿಕರಗಳಿಂದಾಗಿ ಭಕ್ತರ ಸಂಚಾರಕ್ಕೆ ತೊಂದರೆಯಾಗುವುದಲ್ಲದೆ, ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇದೆ.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಳ ಕಂಡಿದ್ದು, ಸುಗಮ ಸಂಚಾರ ವ್ಯವಸ್ಥೆಗಾಗಿ ಸಿಗ್ನಲ್ ಕಂಬ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಕಂಬ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ನಗರದ ತ್ರಿವೇಣಿ ವೃತ್ತ, ಹಳೆ ಡಯಾನ ವೃತ್ತದಲ್ಲಿ ಸಿಗ್ನಲ್ ಕಂಬದ ತಳಪಾಯ ಕಾಮಗಾರಿ ಮುಗಿದಿದೆ. ಆದರೆ ಕಂಬ ಜೋಡಿಸುವ ಕಾಮಗಾರಿ ಸ್ಥಗಿತಗೊಂಡು ಮೂರು ತಿಂಗಳೇ ಕಳೆದಿದೆ. ಜೋಡಣೆಗೆ ತಂದಿರುವ ಲಾರಿಗಟ್ಟಲೆ ಸಾಮಾಗ್ರಿಗಳನ್ನು ಪಾದಚಾರಿ ರಸ್ತೆಯಲ್ಲಿ ಸಂಗ್ರಹಿಸಿಡಲಾಗಿದೆ. ಪಾದಚಾರಿಗಳು ನಡೆದಾಡಲು ಆಗದೆ ರಸ್ತೆಯಲ್ಲೆ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಡಯಾನ ವೃತ್ತದಲ್ಲಿ ರಸ್ತೆಯು ತಿರುವು ಪಡೆದಿರುವುದರಿಂದ ಇಲ್ಲಿ ಬಹಳಷ್ಟು ದ್ವಿಚಕ್ರ ವಾಹನ ಸವಾರರಿಗೆ ಕಂಬಗಳು ಗೋಚರಕ್ಕೆ ಬಾರದೆ ಅಪಘಾತವಾಗಿರುವ ಘಟನೆಗಳು ನಡೆದಿವೆ. ಇಲ್ಲಿ ಎದುರಾಗಿರುವ ಸಮಸ್ಯೆಯನ್ನು ಪರಿಶೀಲಿಸಿ ಜಿಲ್ಲಾಡಳಿತವು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.

ಯಾವುದೇ ಅವಘಡ ನಡೆಯದಂತೆ ಮುಂಜಾಗೃತ ಕ್ರಮವಾಗಿ ರಸ್ತೆಯಲ್ಲಿ ಮಲಗಿಸಿರುವ ಕಂಬಗಳಿಗೆ ಪ್ರತಿಫಲನ ಪಟ್ಟಿ (ರಿಪ್ಲಕ್ಟರ್ ಸ್ಟಿಕ್ಕರ್) ಅಂಟಿಸಿ ಸಾಮಾಜಿಕ ಪ್ರಜ್ಞೆ ತೋರಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು