ಉಡುಪಿ: ಕುಂದಾಪುರದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಕುಂದೇಶ್ವರ ದೀಪೋತ್ಸವದ ಅಂಗವಾಗಿ 10ನೇ ವರ್ಷದ ಕಾರ್ಟೂನ್ ಹಬ್ಬಕ್ಕೆ ಶುಭಕೋರುವ ಮರಳು ಶಿಲ್ಪವನ್ನು ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ರಚಿಸಲಾಯಿತು.
ಕುಂದೇಶ್ವರ ದೇವರನ್ನು ಕೇಂದ್ರವಾಗಿಸಿ 4 ಅಡಿ ಮತ್ತು 7.5 ಅಡಿ ಎತ್ತರ ಹಾಗೂ ಅಗಲದ ಮರಳು ಕಲಾಕೃತಿಯನ್ನು ಉಡುಪಿ ಸ್ಯಾಂಡ್ ಥೀಮ್ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದರು.
ಈ ಸಂದರ್ಭದಲ್ಲಿ ‘ಕಾರ್ಟೂನ್ ಹಬ್ಬ’ದ ನೇತಾರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಮತ್ತು ಬಳಗದವರು ಉಪಸ್ಥಿತರಿದ್ದರು.