ಉಡುಪಿ: ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ ಬೇಕು ಎಂಬ ವಿಷಯ ಚರ್ಚೆಗೊಳಗಾಗಿದೆ. ದೇವರಿಗೂ ರೆಸ್ಟ್ ಬೇಕೇ? ಪ್ರತಿದಿನ ಅಯೋಧ್ಯೆಗೆ ಭಕ್ತ ಜನ ಸಾಗರ ಹರಿದು ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರ ಮಂದಿರ ಪ್ರವೇಶಕ್ಕೆ ಮಧ್ಯಾಹ್ನ ಮೂವತ್ತು ನಿಮಿಷದ ವಿರಾಮ ಘೋಷಣೆ ಮಾಡಲಾಗಿದೆ.
ರಾಮ ಲಲ್ಲಾನಿಗೆ ಇನ್ನೂ ಐದು ವರ್ಷ ಪ್ರಾಯ ಆಗಿರುವುದರಿಂದ ಪುಟ್ಟ ಮಗು ರಾಮನ ವಿಶ್ರಾಂತಿಗಾಗಿ ಮಧ್ಯಾಹ್ನ ಅರ್ಧಗಂಟೆ ಮಂದಿರದ ಅರ್ಚಕರು ವಿರಾಮ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಶ್ರೀಗಳು ಅಯೋದ್ಯೆಯಲ್ಲೇ ಇದ್ದು ಅಲ್ಲಿನ ಕೆಲವು ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದಾರೆ. ಅಲ್ಲಿಂದಲೇ ಶ್ರೀಗಳು ವಿಶ್ರಾಂತಿ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.