News Karnataka Kannada
Tuesday, May 07 2024
ಉಡುಪಿ

ಬ್ರಹ್ಮಾವರದಲ್ಲಿ ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣು

Mother commits suicide after sending WhatsApp message to daughter in Brahmavar
Photo Credit : News Kannada

ಬ್ರಹ್ಮಾವರ: ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಎ.7ರಂದು ನಡೆದಿದೆ.

ಬ್ರಹ್ಮಾವರ ನಿವಾಸಿ 62ವರ್ಷದ ಆಶಾಲತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ದತ್ತು ಪುತ್ರಿ ಶಮೀಕ್ಷಾ ಎಂಬವರೊಂದಿಗೆ ವಾಸವಾಗಿದ್ದು, ಅವರ ಪತಿ ಮೃತಪಟ್ಟಿದ್ದರು. ತಾಯಿ ಆಶಾಲತಾ ಹಾಗೂ ಮಗಳು ಶಮೀಕ್ಷಾಳಿಗೆ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿತ್ತು. ಇದೇ ವಿಚಾರದಲ್ಲಿ ಮನನೊಂದ ಆಶಾಲತಾ ಅವರು ನಿನ್ನೆ ಮಗಳಿಗೆ ‘ತಾನು ಸಾಯುತ್ತೇನೆ ಎಂದು’ ವಾಟ್ಸಪ್‌ ಸಂದೇಶ ಕಳುಹಿಸಿ, ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಮೃತ ಆಶಾಲತಾ ಅವರ ತಂಗಿ ಜ್ಯೋತಿಪ್ರಭಾ ಅವರು ಮರಣದಲ್ಲಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು