ಕುಂದಾಪುರ: ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ಜನಾರ್ದನ ಪೂಜಾರಿ ಅವರಿಗೆ ರಸ್ತೆ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಎರಡು ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು ಕಾಲಿನ ಮೂಳೆ ಮುರಿದು ಹೋಗಿದೆ ಶಸ್ತ್ರ ಚಿಕಿತ್ಸೆಗೆ ವೈದ್ಯರು ಆರು ಲಕ್ಷ ತಗಲುದೆಂದು ಹೇಳಿದ್ದಾರೆ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬ ಕಂಗಾಲಾಗಿದ್ದಾರೆ.ಸಹೃದಯಿ ಬಾಂಧವರಿಂದ ಸಾಮಾಜಿಕ ನೆರವನ್ನು ಯಾಚಿಸಿದ್ದಾರೆ.
ಜನಾರ್ದನ ಪೂಜಾರಿ ಅವರು ಯಕ್ಷಗಾನ ನೋಡಿಕೊಂಡು ಹಿಂತಿರುಗಿ ಮನೆಗೆ ಬರುವಾಗ ತ್ರಾಸಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರ ಕಾಲಿನ ಮೂಳೆ ಮುರಿತವಾಗಿದೆ.ಮನೆಯ ಆಧಾರ ಸ್ತಂಭದಂತಿದ್ದ ಮಗನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಕುಟುಂಬ ಆರ್ಥಿಕ ನೆರವನ್ನು ಯಾಚಿಸಿದ್ದಾರೆ.
ಸಹಾಯ ಮಾಡಬಯಸುವವರು ಅವರ ಖಾತೆಗೆ ಹಣ ನೇರವಾಗಿ ಜಮಾವಣೆ ಮಾಡಬಹುದು.