ಕುಂದಗೋಳ: ದಾವಣಗೆರೆಗೆ ಮಾ. 25 ಶನಿವಾರದಂದು ಮೋದಿ ಆಗಮಿಸುವಲ್ಲಿ ಬೃಹತ್ ವಿಜಯ ಸಂಕಲ್ಪ ಯಾತ್ರೆಗೆ ಕುಂದಗೋಳ ತಾಲೂಕಿನಿಂದ 25 ಸಾವಿರ ಜನ ತೆರಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಆರ್.ಪಾಟೀಲ್ ಹೇಳಿದರು.
ಅವರು ಕುಂದಗೋಳ ಪಟ್ಟಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಕುಂದಗೋಳ ಪಟ್ಟಣದ ಅಮಿತ್ ಶಾ ರೋಡ್ ಶೋ, ಗುಡಗೇರಿಯ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಿದ್ದು, ಬಣ್ಣದರ್ಪಣೆ ಕಾರ್ಯಕ್ರಮದಿಂದ ಇಲ್ಲಿಯವರೆಗೆ 6 ಕಾರ್ಯಕ್ರಮ ಯಶಸ್ವಿಯಾಗಿವೆ.
ಈಗಾಗಲೇ ರಾಜ್ಯಾದ್ಯಂತ ನಡೆದ ವಿಜಯ ಸಂಕಲ್ಪ ಯಾತ್ರೆ ಬೃಹತ್ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯಲಿದ್ದು, ಮೋದಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಹ ಯಶಸ್ವಿಯಾಗಲಿದೆ ಎಂದರು. ಕೇಂದ್ರ ಹಾಗೂ ರಾಜ್ಯ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದು, ಬಿಜೆಪಿ ಕಾರ್ಯಕ್ರಮ ಆಯೋಜನೆ ಮಾಡುವುದನ್ನು ಮಾಡಿದ್ರೆ ಕಾರ್ಯಕರ್ತರೇ ಆ ಕಾರ್ಯಕ್ರಮ ಯಶಸ್ವಿ ಮಾಡಲಿದ್ದಾರೆ ಎಂದು ಎಂ.ಆರ್.ಪಾಟೀಲ್ ಹೇಳಿದರು.