ಕುಂದಾಪುರ: ಪಶ್ಚಿಮಬಂಗಾಳದ ದಿಂಡಾ ಪುರೋಲಿ ಜಿಲ್ಲೆಯ ಕೃಷ್ಣದಾಸ (50) ಎಂಬುವರು ದೇಶದ ಜನತೆಗೆ ಭಾವೈಕ್ಯತೆಯ ಸಂದೇಶ ಸಾರಲು ಕಾಲ್ನಡಿಗೆಯ ಮೂಲಕ ದೇಶ ಪರ್ಯಾಟನೆ ಮಾಡುತ್ತಿದ್ದಾರೆ.
ತಮಿಳುನಾಡು,ಆಂಧ್ರ, ಕರ್ನಾಟಕದ ಮೂಲಕ ಸಂಚರಿಸುತ್ತಿರುವ ಅವರು ಕುಂದಾಪುರ, ಬೈಂದೂರು ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಸರ್ವಧರ್ಮ ಸಮನ್ವಯದ ಸಂದೇಶ ಸಾರುವ ಇವರಿಗೆ ಪತ್ನಿ ಹಾಗೂ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯಿದ್ದು ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂಬ ಕವಿವಾಣೆಯನ್ನು ನೆನೆಯುತ್ತಾ ನಾವು ಎಲ್ಲರೂ ಒಂದೇ ಎಂದು ಸಂದೇಶ ಸಾರಲು ಕಾಲ್ನಡಿಗೆಯ ಪಯಣ ಮಾಡುತ್ತಿದ್ದಾರೆ.
ಅಲ್ಲಲ್ಲಿ ಜನರು ಕೊಡುವ ಊಟೋಪಚಾರ ಸ್ವೀಕರಿಸಿ, ಹಿಂದೂ, ಮುಸ್ಲಿಂ, ಕ್ರೈಸ್ತ ಮತ ಧರ್ಮ ಬೇರೆ ಬೇರೆ ಆದರೂ ದೇವರು ಒಬ್ಬರೇ ಎಂದು ಸಾರುತ್ತ ಮುನ್ನಡೆಯುತ್ತಿದ್ದಾರೆ.