ಕುಂದಾಪುರ: ನೆರೆ ಹೊರೆಯವರೊಂದಿಗೆ ಉತ್ತಮವಾದ ಸಂಬಂಧವನ್ನು ಬೆಳೆಸಿಕೊಂಡು ಪರೋಪಕಾರದಿಂದ ಬದುಕಿದಾಗ ಮಾತ್ರ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ ಎಂದು ರೋಟರಿ ವಲಯ 1 ರ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸಂಘಟಕರಾದ ಜಗದೀಶ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಗಂಗೊಳ್ಳಿ ಅವರ ಆಶ್ರಯದಲ್ಲಿ ನಡೆದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಝೋನಲ್ ಲಿಫ್ಟಿನೆಂಟ್ ಪ್ರವೀಣ್ ಶೆಟ್ಟಿ,ರೋಟ್ರಾಕ್ಟ್ ಅಧ್ಯಕ್ಷೆ ಶ್ರೇಯ ಗಾಣಿಗ,ಡಿಸ್ಟ್ರಿಕ್ ಕೋ ಆರ್ಡಿನೇಟರ್ ರಾಮನಾಥ ನಾಯಕ್,ಜೋನಲ್ ಕೋಆರ್ಡಿನೇಟರ್ ಜನಾರ್ಧನ್ ಪೆರಾಜೆ,ಉಮೇಶ್ ಮೇಸ್ತ ಉಪಸ್ಥಿತರಿದ್ದರು.
ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಜಾನ್ ಅನುರಾಗ್ ಅವರನ್ನು ಸನ್ಮಾನಿಸಲಾಯಿತು. ದಯಾನಂದ್ ಗಾಣಿಗ ಸ್ವಾಗತಿಸಿದರು.ಕೃಷ್ಣ ನಿರೂಪಿಸಿದರು.ಚಂದ್ರಕಲಾ ತಾಂಡೇಲ್ ವಂದಿಸಿದರು.