ಕುಂದಾಪುರ: ರಾಜ್ಯದಲ್ಲಿ ವಿಧಾನಸಭೆ ಸಭೆ ಚುನಾವಣೆ ಖದರ್ ಕಳೆ ಕಟ್ಟಿದೆ ಆಡಳಿತ ರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಚುನಾವಣೆ ಸಮರ ನಡೆಯುತ್ತಿದೆ.
ಬಿಜೆಪಿ ಪಕ್ಷ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿದ್ದರೆ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದೆ ಜೆಡಿಎಸ್ ಪಕ್ಷದ ನಾಯಕರು ಈ ಸಲ ನಾವೇ ನಿರ್ಣಾಯಕ ಎನ್ನುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪ್ರಚಾರದ ಕೆಲಸವನ್ನು ಕೈಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗುತ್ತದೆ ಎನ್ನುವ ಗಾಳಿ ಸುದ್ದಿಗಳು ತೇಲಾಡುತ್ತಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಬಂದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ.
ಸೋಲಿಲ್ಲದ ಸರದಾರನಾಗಿ ಸತತ ನಾಲ್ಕು ಬಾರಿ ಗೆಲುವುವನ್ನು ಕಂಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬೇರೆ ಯಾವ ಪಕ್ಷದಿಂದಲೂ ಸಮರ್ಥವಾದ ಎದುರಾಳಿಗಳೇ ಇಲ್ಲಾ ಎನ್ನುವಂತ ವಾತಾವರಣ ನಿರ್ಮಾಣವಾಗಿದ್ದು ಬಿಜೆಪಿ ಭದ್ರಕೋಟೆಯಾದ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭದ ಮಾತಲ್ಲ.
ಚುನಾವಣೆಯಲ್ಲಿ ಮತದಾರರ ಪಾತ್ರವೇ ಬಹು ಮುಖ್ಯ ವಾಗಿರುವುದರಿಂದ ಮ್ಯಾಜಿಕ್ ನಡೆದರೂ ಅಚ್ಚರಿ ಇಲ್ಲ.