ಕುಂದಾಪುರ: ಬೈಂದೂರು ತಾಲೂಕಿನ ಮರವಂತೆ ಶ್ರೀ ರಾಮ ಮಂದಿರದಲ್ಲಿ ಮಾ.20 ರಿಂದ ಮಾ.31 ರ ತನಕ ನಡೆಯಲಿರುವ ರಜತ ಮಹೋತ್ಸವ ಕಾರ್ಯಕ್ರಮ, ಶ್ರೀದೇವರ ಪುನರ್ ಪ್ರತಿಷ್ಠೆ,ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀರಾಮ ದೇವರಿಗೆ ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ, 90 ನೇ ವರ್ಷದ ಭಜನಾ ಮಹೋತ್ಸವ, ಸಮುದ್ರ ರಾಜನಿಗೆ ಸಮುದ್ರ ಆರತಿ, ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮ ಮಂದಿರ ಮರವಂತೆಯಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮರವಂತೆ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಜಿ.ಹೊನ್ನಾ ಖಾರ್ವಿ ಮತ್ತು ಪಿ.ಚಂದ್ರ ಖಾರ್ವಿ, ಮಾಜಿ ಕಾರ್ಯದರ್ಶಿ ಸಂಜೀವ ಖಾರ್ವಿ, ರಜ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದಿನಕರ ಖಾರ್ವಿ, ಕೆ.ಶ್ರೀಧರ, ಕೋಶಾಧಿಕಾರಿ ಭಾಸ್ಕರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮರವಂತೆ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಖಾರ್ವಿ ಸ್ವಾಗತಿಸಿದರು. ಭಾಸ್ಕರ ವಂದಿಸಿದರು.