News Karnataka Kannada
Saturday, May 11 2024
ಉಡುಪಿ

ಕುಂದಾಪುರ: ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನೂತನ ವಿಗಹ್ರದ ಮೆರವಣಿಗೆ

Kundapur: Gangolli Sri Mahankali Amma's new 'Vigahra' procession
Photo Credit : News Kannada

ಕುಂದಾಪುರ: ಗಂಗೊಳ್ಳಿ ಗ್ರಾಮದ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹಾಂಕಾಳಿ ಅಮ್ಮ ಮತ್ತು ಪರಿವಾರ ದೇವರ ನೂತನ ವಿಗ್ರಹದ ಪುರ ಪ್ರವೇಶ ಮೆರವಣಿಗೆ ತ್ರಾಸಿಯಿಂದ ಗಂಗೊಳ್ಳಿ ಬಂದರ್ ಬಸ್ ನಿಲ್ದಾಣದಿಂದ ಸನ್ನಿಧಾನದವರೆಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಮೀನುಗಾರರ ಆರಾಧ್ಯ ದೇವರಾದ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನೂತನ ವಿಗ್ರಹ,ಅಮ್ಮನವರ ಬೆಳ್ಳಿ ಮುಖವಾಡ, ಬೆಳ್ಳಿ ಪ್ರಭಾವಳಿ, ಬೆಳ್ಳಿ ನಂದಿ ಮುಖವಾಡ, ಬ್ರಹ್ಮಕಳಶ, ಪರಿವಾರ ದೇವರ ವಿಗ್ರಹವನ್ನು ಭವ್ಯ ಮೆರವಣಿಗೆ ಮೂಲಕ ಮೀನುಗಾರ ಬಂಧುಗಳು ಮತ್ತು ಗ್ರಾಮಸ್ಥರು ಬರಮಾಡಿಕೊಂಡರು.

ಹುಲಿ ಕುಣಿತ,ವಾದ್ಯ ಘೋಷ,ಚಂಡೆ ಕುಣಿತ,ನಾಶಿಕ್ ಬೆಂಡ್,ಭಜನೆ ಕುಣಿತ ಮೆರವಣಿಗೆಗೆ ಮೆರುಗನ್ನು ನೀಡಿತು.ಮಾತೆಯರು ಮತ್ತು ಪುರುಷರು ಸಮವಸ್ತ್ರವನ್ನು ಧರಿಸಿದ್ದರು,ತ್ರಾಸಿಯಿಂದ ಅಮ್ಮನವರ ಸನ್ನಿಧಾನದ ವರೆಗೆ ಬೈಕ್ ರ್ಯಾಲಿ ನಡೆಯಿತು 200 ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡರು,ಸಾವಿರಾರರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗಂಗೊಳ್ಳಿ ಪೆÇಲೀಸ್ ಠಾಣೆಯ ಠಾಣಾಧಿಕಾರಿ ವಿನಯ ಎಂ ಕೊರಲಹಳ್ಳಿ ಮತ್ತು ಗುಪ್ತದಳ ಪಿಎಸ್‍ಐ ಜಯಶ್ರೀ ಹೊನ್ನೂರು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಯಿತು. ಜ.26 ಗುರುವಾರ ದಂದು ಶ್ರೀ ಮಹಾಂಕಾಳಿ ಅಮ್ಮನವರ ಬಿಂಬ ಪ್ರತಿಷ್ಠೆ ನೆರವೇರಲಿದೆ,ಜ.27 ಶುಕ್ರವಾರ ದಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜರುಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು