ಕುಂದಾಪುರ: ಗಂಗೊಳ್ಳಿ ಗ್ರಾಮದ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹಾಂಕಾಳಿ ಅಮ್ಮ ಮತ್ತು ಪರಿವಾರ ದೇವರ ನೂತನ ವಿಗ್ರಹದ ಪುರ ಪ್ರವೇಶ ಮೆರವಣಿಗೆ ತ್ರಾಸಿಯಿಂದ ಗಂಗೊಳ್ಳಿ ಬಂದರ್ ಬಸ್ ನಿಲ್ದಾಣದಿಂದ ಸನ್ನಿಧಾನದವರೆಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಮೀನುಗಾರರ ಆರಾಧ್ಯ ದೇವರಾದ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನೂತನ ವಿಗ್ರಹ,ಅಮ್ಮನವರ ಬೆಳ್ಳಿ ಮುಖವಾಡ, ಬೆಳ್ಳಿ ಪ್ರಭಾವಳಿ, ಬೆಳ್ಳಿ ನಂದಿ ಮುಖವಾಡ, ಬ್ರಹ್ಮಕಳಶ, ಪರಿವಾರ ದೇವರ ವಿಗ್ರಹವನ್ನು ಭವ್ಯ ಮೆರವಣಿಗೆ ಮೂಲಕ ಮೀನುಗಾರ ಬಂಧುಗಳು ಮತ್ತು ಗ್ರಾಮಸ್ಥರು ಬರಮಾಡಿಕೊಂಡರು.
ಹುಲಿ ಕುಣಿತ,ವಾದ್ಯ ಘೋಷ,ಚಂಡೆ ಕುಣಿತ,ನಾಶಿಕ್ ಬೆಂಡ್,ಭಜನೆ ಕುಣಿತ ಮೆರವಣಿಗೆಗೆ ಮೆರುಗನ್ನು ನೀಡಿತು.ಮಾತೆಯರು ಮತ್ತು ಪುರುಷರು ಸಮವಸ್ತ್ರವನ್ನು ಧರಿಸಿದ್ದರು,ತ್ರಾಸಿಯಿಂದ ಅಮ್ಮನವರ ಸನ್ನಿಧಾನದ ವರೆಗೆ ಬೈಕ್ ರ್ಯಾಲಿ ನಡೆಯಿತು 200 ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡರು,ಸಾವಿರಾರರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗಂಗೊಳ್ಳಿ ಪೆÇಲೀಸ್ ಠಾಣೆಯ ಠಾಣಾಧಿಕಾರಿ ವಿನಯ ಎಂ ಕೊರಲಹಳ್ಳಿ ಮತ್ತು ಗುಪ್ತದಳ ಪಿಎಸ್ಐ ಜಯಶ್ರೀ ಹೊನ್ನೂರು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಯಿತು. ಜ.26 ಗುರುವಾರ ದಂದು ಶ್ರೀ ಮಹಾಂಕಾಳಿ ಅಮ್ಮನವರ ಬಿಂಬ ಪ್ರತಿಷ್ಠೆ ನೆರವೇರಲಿದೆ,ಜ.27 ಶುಕ್ರವಾರ ದಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜರುಗಲಿದೆ.