ಕುಂದಾಪುರ: ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿ ಮನೆಯೊಂದರ ಹಿತ್ತಲಲ್ಲಿ ತೆರೆದ ಬಾವಿಗೆ ಬಿದ್ದ ಗೋವುವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮೇವನ್ನು ಹುಡುಕಿಕೊಂಡು ಹಿತ್ತಲಿಗೆ ಹೋದ ಗೋವು ಆವರಣದವಿಲ್ಲದ ಆಳದ ಬಾವಿಗೆ ಬಿದ್ದಿದೆ ಪ್ರಾಣ ಭಯದಿಂದ ನೀರಿನಲ್ಲಿ ಹೊರಳಾಡುತ್ತಿದ್ದ ಸಂದರ್ಭದಲ್ಲಿ ಬಾವಿಯಲ್ಲಿ ಶಬ್ಧ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಸಹಾಯದಿಂದ ಒಂದು ಘಂಟೆಗಳ ಕಾಲ ಕಾರ್ಯಚರಣೆ ನಡೆಸಿ ಗೋವುವನ್ನು ರಕ್ಷಿಸಲಾಗಿದೆ.