ಕುಂದಾಪುರ: ಶಂಕರನಾರಾಯಣ ಗ್ರಾಮ ಪಂಚಾಯತಿಯ ಎಸ್ಎಲ್ಆರ್ಎಂ ಘಟಕದ ಸ್ವಚ್ಛತಾ ಸಿಬ್ಬಂದಿ ದೇವಕಿ ಅವರಿಗೆ ಘನ ತ್ಯಾಜ್ಯದಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ವಾರೀಸುದಾರರಿಗೆ ಹಸ್ತಾಂತರ ಮಾಡುವುದರ ಮುಖೇನ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರತಿ ದಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಕಸವನ್ನು ನೀಡುತ್ತಿದ್ದ ಮನೆಯವರ 2 ಗ್ರಾಂ ಚಿನ್ನದ ಉಂಗುರ ಕಳೆದು ಹೋಗಿತ್ತು.ಈ ಬಗ್ಗೆ ಕಸ ವಿಲೇವಾರಿ ಸಿಬ್ಬಂದಿ ಜತೆ ಮಾತನಾಡಿದ ಮನೆಯವರು ಉಂಗುರ ಕಳೆದು ಹೋಗಿರುವ ಬಗ್ಗೆ ಮಾತನ್ನು ಆಡಿದ್ದಾರೆ.
ಆಕಸ್ಮಾತ್ ಕಸ ಜತೆ ಉಂಗುರ ಬಂದಿದ್ದರೆ ಕಸವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುವಂತೆ ಮನವಿಯನ್ನು ಮಾಡಿದ್ದರು. ಎಸ್ಎಲ್ಆರ್ ಎಂ ಘಟಕದಲ್ಲಿ ಕಸವನ್ನು ವಿಂಗಡಣೆ ಮಾಡುವ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿ ದೇವಕಿ ಅವರಿಗೆ ಕೈ ಉಂಗುರ ಸಿಕ್ಕಿದೆ. ಕೂಡಲೇ ಅವರು ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿ ವಾರೀಸುದಾರರಿಗೆ ಉಂಗುರವನ್ನು ಹಸ್ತಾಂತರ ಮಾಡಿದರು. ಸ್ವಚ್ಛತಾ ಸಿಬ್ಬಂದಿ ದೇವಕಿ ಅವರ ಪ್ರಾಮಾಣಿಕತೆ ಸಾಮಾಜಿಕ ಪ್ರಶಂಸನೆಗೆ ಪಾತ್ರವಾಗಿದೆ.