ಕಾರ್ಕಳ: ಸಾಣೂರು ಶಾಂಭವಿ ನದಿಯ ತಟದಲ್ಲಿ ಇರುವ ಸಾಣೂರು ಅಸ್ಸಯ್ಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ದರ್ಗಾವು ಸರ್ವಧರ್ಮಿಯರ ಆರಾಧನಾಲಯವಾಗಿದೆ.
ದಕ್ಷಿಣ ಭಾರತದಲ್ಲಿ ಸಾವಿರಾರು ಕರಾಮತ್ಳಿಂದ ಖ್ಯಾತಿ ಪಡೆದಿರುವ ತಮಿಳುನಾಡಿನ ಏರ್ವಾಡಿ ಸೈಯ್ಯದ್ ಇಬ್ರಾಹಿಂರವರ ಪರಂಪರೆಯಲ್ಲಿ ಧನ್ಯಗೊಂಡ ಕಾರ್ಕಳ ತಾಲೂಕಿನ ಸಾಣೂರು ಊರಿನಲ್ಲಿ ಅಂತ್ಯ ವಿಶ್ರಮ ಹೊಂದಿರುವ ಸೈಯ್ಯದ್ ಶಾಹುಲ್ ಹಮೀದ್ ಇವರ ಉರೂಸ್ ಮಾರ್ಚ್ ೧೮ರಂದು ಜರಗಲಿರುವುದು.
ದೇಶ ವ್ಯಾಪ್ತಿಯಲ್ಲಿ ತನ್ನದೇ ಆದ ಅಸಂಖ್ಯಾತ ಭಕ್ತರನ್ನು ಸಾಣೂರು ದರ್ಗ ಹೊಂದಿದೆ. ಅದರಲ್ಲೂ ವಿಶೇಷತೆ ಎಂಬ0ತೆ ಝಿಯಾರತ್ ನಡೆಯುತ್ತದೆ. ದುಷ್ಟಶಕ್ತಿಯ ಪ್ರಭಾವಕ್ಕೆ ತುತ್ತಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಿಗೆ ಪ್ರಾರ್ಥನೆ ಹಾಗೂ ದಾರ್ಮಿಕ ವಿಧಿ ವಿಧಾನದೊಂದಿಗೆ ಯೋಗ್ಯ ಚಿಕಿತ್ಸೆ ಮೂಲಕ ರೋಗ ಶ್ರಮನಗೊಳಿಸುವುದು ಇದಾಗಿದೆ. ಇಂತಹ ಶಕ್ತಿ ತಮಿಳುನಾಡಿನ ಏರ್ವಾಡಿ ಸೈಯ್ಯದ್ ಇಬ್ರಾಹಿಂ ದರ್ಗ ಹೊಂದಿದೆ. ಆದುದರಿಂದಲೇ ದೇಶದ ನಾನಾ ಕಡೆಗಳಿಂದ ಅಸಂಖ್ಯಾತ ಭಕ್ತಾದಿಗಳು ಸಾಣೂರು ದರ್ಗಾಕ್ಕೆ ಅಗಮಿಸಿ ನೆಮ್ಮದಿಯ ಬದುಕು ನಿರ್ವಹಿಸುತ್ತಿದ್ದಾರೆ.
ನಾನಾ ಪವಾಡಗಳು ಅಗೋಚರ ಶಕ್ತಿಹೊಂದಿರುವ0ತಹ ಈ ಪುಣ್ಯಭೂಮಿಗೆ ಸರ್ವಧರ್ಮೀಯರು ಅಗಮಿಸುತ್ತಾರೆ ಎಂಬುವುದು ಮತ್ತೊಂದು ಗಮನಾರ್ಹವಾಗಿದೆ.
ಗುತ್ತಿಗೆ ಆಮಂತ್ರಣ ನೀಡುತ್ತಿದ್ದರು :ಇಲ್ಲಿ ಜರುಗುವಂತಹ ಉರೂಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವದಲ್ಲಿ ಸಾಣೂರು ಗುತ್ತಿಗೆ ಮೆರವಣಿಗೆಯಲ್ಲಿ ತೆರೆಳಿ ಆಮಂತ್ರಣ ನೀಡುವ ಸಂಪ್ರದಾಯ ನಡೆಯುತ್ತಿತ್ತು. ಅಲ್ಲಿಗೆ ತೆರಳುವ ಮುಸ್ಲಿಂ ಬಾಂಧವರಿಗೆ ಅತಿಥಿ ಸತ್ಕಾರ್ಯಗಳು ಸಿಗುತ್ತಿತ್ತು. ಕಾಲ ಕ್ರಮೇಣ ಈ ಸಂಪ್ರದಾಯ ಕೊಂಡಿ ಕಳಚಿಬಿತ್ತು.