News Karnataka Kannada
Monday, April 29 2024
ಮಂಗಳೂರು

ಪುತ್ತೂರು: ಉತ್ತರಾಖಂಡದ ‘ಸರಸ್ ಫೇರ್’ಗೆ ಕಲ್ಲರ್ಪೆಯ ಅಂಬಿಕಾ ರಮೇಶ್

Ambika Ramesh from Kallarpe attends 'Saras Fair' in Uttarakhand
Photo Credit : News Kannada

ಪುತ್ತೂರು: ಉತ್ತರಾಖಂಡ ರಾಜ್ಯದಲ್ಲಿ ಮಾರ್ಚ್ 19ರಿಂದ ನಡೆಯಲಿರುವ `ಸರಸ್ ಫೇರ್’ನಲ್ಲಿ ಪುತ್ತೂರಿನ ಅವನಿ ಸಂಜೀವಿನಿ ಸಂಘದ ಅಂಬಿಕಾ ರಮೇಶ್ ಅವರು ಪಾಲ್ಗೊಳ್ಳುತ್ತಿದ್ದಾರೆ.

ಸರಸ್ ಫೇರ್’ನಲ್ಲಿ ಭಾಗವಹಿಸಲು ರಾಜ್ಯದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಿಂದ ಪುತ್ತೂರಿನ ಕಲ್ಲರ್ಪೆ ನಿವಾಸಿ ಅಂಬಿಕಾ ರಮೇಶ್ ಭಾಗವಹಿಸುತ್ತಿದ್ದರೆ, ಇನ್ನೊಬ್ಬರು ರಾಯಚೂರಿನ ಸಿಂಧನೂರು ತಾಲೂಕಿನ ಲಕ್ಷ್ಮೀ.

ಅಂಬಿಕಾ ರಮೇಶ್ ಅವರು ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿರುವ ಅಲಂಕಾರಿನ ಉತ್ಪನ್ನಗಳು, ಉಪ್ಪಿನಕಾಯಿ, ಸ್ನ್ಯಾಕ್ಸ್ ಮೊದಲಾದ ಉತ್ಪನ್ನಗಳನ್ನು `ಸರಸ್ ಫೇರ್’ನಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಮಾರ್ಚ್ 19ರಿಂದ ಮಾರ್ಚ್ 28ರವರೆಗೆ ಉತ್ತರಾಖಂಡಿನ ಚಂಪಾವತಿನ ತನಕಪುರ ಸಮೀಪ ಸರಸ್ ಫೇರ್ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು